Advertisement

ಸನಾತನ ಸಂಸ್ಥೆ ಉಗ್ರ ಸಂಘಟನೆ: ಕಾಂಗ್ರೆಸ್‌ ನಾಯಕ ಚವಾಣ್‌

02:02 AM May 12, 2024 | Team Udayavani |

ಮುಂಬಯಿ: ವಿಚಾರವಾದಿ ಡಾ| ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ತೀರ್ಪು ತೃಪ್ತಿದಾಯಕವಾಗಿಲ್ಲ. ಸನಾತನ ಸಂಸ್ಥೆ ಉಗ್ರ ಸಂಘಟನೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚವಾಣ್‌ ಅಸಮಾಧಾನ ಹೊರಹಾಕಿದ್ದಾರೆ. ತೀರ್ಪಿನ ಬಗ್ಗೆ ಶನಿವಾರ ಮಾತನಾಡಿದ ಅವರು, 2013 ಆ.20ರಂದು ನಡೆದ ದಾಭೋಲ್ಕರ್‌ ಹತ್ಯೆ ಹಿಂದೆ ಸನಾತನ ಸಂಸ್ಥೆಯ ಪಾತ್ರವೇನಿತ್ತು, ಮಾಸ್ಟರ್‌ ಮೈಂಡ್‌ ಯಾರೆಂದು ಸ್ಪಷ್ಟಪಡಿಸಿಲ್ಲ. ತೀರ್ಪಿನಲ್ಲಿ  ಇಬ್ಬರು ಅಪರಾಧಿಗಳಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸನಾತನ ಸಂಸ್ಥೆ ಸಂಘಟನೆ ನಿಷೇಧಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಆಗ್ರಹಿಸಿದ್ದೆ. ಆದರೆ ಅದು ಹಾಗೇ ಉಳಿದಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next