Advertisement

ಸನಾತನ ಧರ್ಮವೇ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್

03:18 PM Jan 28, 2023 | Team Udayavani |

ಜೈಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶುಕ್ರವಾರ “ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮ” ಎಂದು ಹೇಳಿದರು.

Advertisement

ರಾಜಸ್ಥಾನದ ಭಿನ್ಮಾಲ್‌ ನ ನೀಲಕಂಠ ಮಹಾದೇವ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲಾ ನಾಗರಿಕರು ಅದನ್ನು ಪಾಲಿಸಬೇಕೆಂದು ಒತ್ತಾಯಿಸಿದರು.

ಅಯೋಧ್ಯೆಯ ರಾಮ ಮಂದಿರದ ಮಾದರಿಯಲ್ಲಿ ಹಾನಿಗೀಡಾದ ಪವಿತ್ರ ಸ್ಥಳಗಳನ್ನು ಪುನರ್‌ ನಿರ್ಮಾಣ ಮಾಡಲು ಅಭಿಯಾನವನ್ನು ಪ್ರಾರಂಭಿಸುವಂತೆ ಸಿಎಂ ಯೋಗಿ ಅವರು ಜನರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಮತ್ತು ಕೇಂದ್ರ ಜಲವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರುದ್ರಾಕ್ಷಿಯನ್ನು ನೆಟ್ಟರು.

ಯಾವುದೇ ಅವಧಿಯಲ್ಲಿ ನಮ್ಮ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ 500 ವರ್ಷಗಳ ನಂತರ ಭವ್ಯವಾದ ರಾಮನ ಮಂದಿರ ನಿರ್ಮಾಣ ನಡೆಯುತ್ತಿರುವ ಅಯೋಧ್ಯೆಯ ಮಾದರಿಯಲ್ಲಿ ಅವುಗಳ ಜೀರ್ಣೋದ್ಧಾರಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಬೇಕು. ರಾಷ್ಟ್ರೀಯ ಭಾವನೆಯನ್ನು ಪ್ರತಿನಿಧಿಸುವ ಭಗವಾನ್ ರಾಮನ ಈ ಭವ್ಯವಾದ ರಾಷ್ಟ್ರೀಯ ದೇವಾಲಯದ ನಿರ್ಮಾಣಕ್ಕೆ ನೀವೆಲ್ಲರೂ ಭಕ್ತರು ಕೊಡುಗೆ ನೀಡಿದ್ದೀರಿ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಇದನ್ನೂ ಓದಿ:ಬೆಂಗಳೂರು: 7ನೇ ಕ್ಲಾಸ್ ಓದಿದ್ದ ವ್ಯಕ್ತಿ ಯೂಟ್ಯೂಬ್ ನೋಡಿ ಖೋಟಾನೋಟು ಸೃಷ್ಟಿಸಿದ!

Advertisement

“ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪರಂಪರೆಯನ್ನು ಗೌರವಿಸುವ ಮತ್ತು ಅದನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ಇಡೀ ದೇಶಕ್ಕೆ ಮಾಡಿದ್ದಾರೆ ಎಂದು ಸಿಎಂ ಯೋಗಿ ಹೇಳಿದರು. 1400 ವರ್ಷಗಳ ನಂತರ ಭಗವಾನ್ ನೀಲಕಂಠನ ದೇವಾಲಯವನ್ನು ಮತ್ತೊಮ್ಮೆ ಭವ್ಯವಾಗಿ ಜೀರ್ಣೋದ್ಧಾರ ಮಾಡಿರುವುದು ಪರಂಪರೆಯ ಗೌರವ ಮತ್ತು ರಕ್ಷಣೆಗೆ ಉದಾಹರಣೆಯಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next