Advertisement

ಶಿರ್ವದಲ್ಲಿ ಕಾಂತಾರ ರಿಷಬ್‌ ಶೆಟ್ಟಿಯ ತದ್ರೂಪಿ

08:33 AM Nov 29, 2022 | Team Udayavani |

ಶಿರ್ವ: ದೇಶ ವಿದೇಶಗಳಿಂದ ಚಿತ್ರ ರಸಿಕರು ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ಕಾಂತಾರ ಚಿತ್ರದ ನಾಯಕ ನಟ, ನಿರ್ದೆಶಕ ರಿಷಬ್‌ ಶೆಟ್ಟಿಯವರ ತದ್ರೂಪಿಯನ್ನು ಶಿರ್ವದ ಯುವಕನೋರ್ವನಲ್ಲಿ ಅಭಿಮಾನಿಗಳು ಕಂಡುಕೊಂಡಿದ್ದು ಸೆಲ್ಪಿಗಾಗಿ ಮುಗಿಬೀಳುತ್ತಿದ್ದಾರೆ.

Advertisement

ಕಾಂತಾರ ಚಿತ್ರದ ಯಶಸ್ಸಿನ ಬಳಿಕ ಶಿರ್ವದ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಶಿರ್ವ ಕೋಡು ಪಂಜಿಮಾರು ನಿವಾಸಿ ಪ್ರದೀಪ್‌ ಆಚಾರ್ಯ ರಿಷಬ್‌ ಶೆಟ್ಟಿಯಂತೆಯೇ ಬಿಳಿ ಪಂಚೆ, ಕನ್ನಡಕ, ಅರ್ಧ ತೋಳಿನ ಅಂಗಿ ಧರಿಸಿ ತನ್ನ ಯಮಾಹಾ ಆರ್‌ಎಕ್ಸ್‌ 100 ಬೈಕ್‌ ಏರಿ ತಿರುಗಾಡುವಾಗ ಒಂದೊಮ್ಮೆ ರಿಷಬ್‌ ಶೆಟ್ಟಿಯೇ ಶಿರ್ವಕ್ಕೆ ಬಂದಿದ್ದಾರೆಂದು ಜನರು ತಿರುಗಿ ನೋಡುವಂತಾಗಿದೆ.

ಇವರು ಕೆಲಸ ಮಾಡುತ್ತಿದ್ದ ಮೊಬೈಲ್‌ ಅಂಗಡಿಗೆ ಬಂದ ಜನರು ನೀವು ರಿಷಭ್‌ ಶೆಟ್ಟಿಯಂತೆಯೇ ಕಾಣುತ್ತಾ ಇದ್ದೀರಿ ಎಂದು ಹೇಳತೊಡಗಿದ್ದು, ಪ್ರದೀಪ್‌ ಆಚಾರ್ಯ ರಿಷಬ್‌ ಶೆಟ್ಟಿಯವರ ವೇಷಭೂಷಣ, ಹಾವಭಾವಗಳನ್ನು ಅನುಕರಿಸಲು ಪ್ರೇರಣೆ ನೀಡಿದೆ. ಇದೀಗ ಅಭಿಮಾನಿಗಳು ಪ್ರದೀಪ್‌ ಆಚಾರ್ಯ ಅವರಲ್ಲಿ ತಮ್ಮ ನೆಚ್ಚಿನ ನಟನನ್ನು ಕಂಡುಕೊಂಡಿದ್ದಾರೆ.

ಕಾಂತಾರ ಚಿತ್ರ ಕಲಾವಿದರಿಗೆ, ಪ್ರತಿಭಾನ್ವಿತರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದ್ದು, ಚಿತ್ರದ ಯಶಸ್ಸಿನ ಬಳಿಕ ಶಿರ್ವದಂತಹ ಗ್ರಾಮೀಣ ಪ್ರದೇಶದ ಯುವಕ ಪ್ರದೀಪ್‌ ಆಚಾರ್ಯ ಬೆಳಕಿಗೆ ಬರುವಂತಾಗಿದೆ.

ರಿಷಬ್‌ ಶೆಟ್ಟಿಯನ್ನೇ ಹೋಲುತ್ತಿರುವುದರಿಂದ ಜನರ ಮಧ್ಯೆ ಗುರುತಿಸಿಕೊಳ್ಳಲು ಖುಷಿಯಾಗುತ್ತಿದ್ದು, ಹೆಚ್ಚಿನ ಜನರ ಗುರುತು ಪರಿಚಯವಾಗಿದೆ. ಅದಲ್ಲದೆ ಮಂಗಳೂರಿನ ಹೊಟೇಲೊಂದರ ಜಾಹೀರಾತಿನಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಈಗ ಬೆಂಗಳೂರಿನಲ್ಲಿದ್ದು ಜೀ ಟಿವಿಯ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ. – ಪ್ರದೀಪ್‌ ಆಚಾರ್ಯ, ಶಿರ್ವ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next