Advertisement

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

03:47 PM Apr 20, 2024 | Team Udayavani |

ಹೈದರಾಬಾದ್/ಮುಂಬಯಿ: 2015 ರಲ್ಲಿ ಬಂದ ಸಲ್ಮಾನ್‌ ಖಾನ್‌ ಅವರ ʼ ಭಜರಂಗಿ ಭಾಯಿಜಾನ್‌ʼ ಸಿನಿಮಾ ದೊಡ್ಡ ಹಿಟ್‌ ಆಗಿತ್ತು. ಇದೀಗ ಸಿನಿಮಾದ ಸೀಕ್ವೆಲ್‌ ಬಗ್ಗೆ ಮತ್ತೊಮ್ಮೆ ಮಾತು ಮುನ್ನೆಲೆಗೆ ಬಂದಿದೆ.

Advertisement

ಕಬೀರ್‌ ಖಾನ್‌ ನಿರ್ದೇಶನದ ಮಾಡಿದ್ದ ʼಭಜರಂಗಿ ಭಾಯಿಜಾನ್‌ʼ ಭಾವನಾತ್ಮಕವಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ಸಲ್ಮಾನ್‌ ಖಾನ್‌ ಅವರ ಅಭಿನಯ ʼಭಜರಂಗಿ ಭಾಯಿಜಾನ್‌ʼ ಸಿನಿರಸಿಕರ ಕಣ್ಣಂಚಿನಲ್ಲಿ ನೀರು ತರಿಸಿತ್ತು.

ಇದೀಗ ಈ ಸಿನಿಮಾದ ಸೀಕ್ವೆಲ್‌ ಬಗ್ಗೆ ಚರ್ಚೆ ಶುರುವಾಗಿದೆ. ಸಿನಿಮಾ ರಿಲೀಸ್‌ ಬಳಿಕ ʼಭಜರಂಗಿ ಭಾಯಿಜಾನ್‌ʼ ಸೀಕ್ವೆಲ್‌ ಬರುತ್ತದೆ ಎನ್ನುವ ಮಾತುಗಳ ಆ ದಿನದಲ್ಲೇ ಹರಿದಾಡಿತ್ತು. ಆದರೆ ಮತ್ತೆ ಮಾತು ಮುಂದುವರೆಯಲೇ ಇಲ್ಲ.

ನಿರ್ಮಾಪಕ ಕೆಕೆ ರಾಧಾಮೋಹನ್ ಅವರು ಹಿಂದಿಯ ʼರುಸ್ಲಾನ್ʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಆಯುಷ್ ಶರ್ಮಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು ಇತ್ತೀಚೆಗೆ ಹೈದರಾಬಾದ್ ಪ್ರಮೋಷನ್‌ ನಡೆದಿದೆ.

ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಕೆಕೆ ರಾಧಾಮೋಹನ್‌ ʼಭಜರಂಗಿ ಭಾಯಿಜಾನ್‌ʼ ಸೀಕ್ವೆಲ್‌ ಬಗ್ಗೆ ಮಾತನಾಡಿದ್ದಾರೆ.

Advertisement

“ವಿಜಯೇಂದ್ರ ಪ್ರಸಾದ್ ನನಗಾಗಿ ಎರಡು ಕಥೆಗಳನ್ನು ಬರೆದಿದ್ದಾರೆ. ಒಂದು ‘ವಿಕ್ರಮಾರ್ಕುಡು 2’, ಹಿಂದಿಯಲ್ಲಿ (ರೌಡಿ ರಾಥೋರ್ 2) ಇದರ ಸಬ್ಜೆಕ್ಟ್ ಸಿದ್ಧವಾಗಿದೆ. ಉತ್ತಮ ಕಲಾವಿದರನ್ನು ಹುಡುಕುತ್ತಿದ್ದೇವೆ” ಎಂದು ಹೇಳಿದ್ದಾರೆ.

“ಭಜರಂಗಿ ಭಾಯಿಜಾನ್‌ 2 ಗಾಗಿ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಅವರು ಅದನ್ನು ಸಲ್ಮಾನ್ ಭಾಯಿಗೆ ವಿವರಿಸುತ್ತಾರೆ ಮತ್ತು ಮುಂದೆ ಏನಾಗುತ್ತದೆ ಎಂಬುದನ್ನು ನೋಡಬೇಕಿದೆ” ಎಂದು ಹೇಳಿದ್ದಾರೆ.

2021 ರಲ್ಲಿ ʼಆರ್‌ ಆರ್‌ ಆರ್‌ʼ ಸಿನಿಮಾದ ಪ್ರಚಾರದ ವೇಳೆ ಸಲ್ಮಾನ್‌ ಖಾನ್‌ ಅವರು ʼಭಜರಂಗಿ ಭಾಯಿಜಾನ್‌ʼ ಸೀಕ್ವೆಲ್‌ ಬಗ್ಗೆ ಮಾತನಾಡಿದ್ದರು.

ಪೂಜಾ ಹೆಗ್ಡೆ ಸೀಕ್ವೆಲ್‌ನಲ್ಲಿ ನಟಿಸಲಿದ್ದು, ʼಪವನ್ ಪುತ್ರ ಭಾಯಿಜಾನ್ʼ ಎನ್ನುವ ಟೈಟಲ್‌ ಇರಲಿದೆ ಎನ್ನಲಾಗಿದೆ.

ʼರೌಡಿ ರಾಥೋರ್ 2ʼ ನಲ್ಲಿ ಅಕ್ಷಯ್‌ ಕುಮಾರ್‌ ಬದಲು ಸಿದ್ಧಾರ್ಥ್ ಮಲ್ಹೋತ್ರಾ ಇರಲಿದ್ದಾರೆ ಎನ್ನಲಾಗಿದೆ. ಆದರೆ ಅದು ಅಧಿಕೃತವಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next