Advertisement

ಅಲ್‌ಖೈದಾ ಹೇಳಿಕೆ ವಿರುದ್ಧ ಸಲೀಂ ಅಹಮದ್‌ ಆಕ್ರೋಶ

09:26 PM Apr 07, 2022 | Team Udayavani |

ಬೆಂಗಳೂರು: ಅಲ್‌ ಖೈದಾ ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ತಿಳಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌  ಮಾಡಿರುವ ಅವರು, ನಾವು ನಮ್ಮ ದೇಶಕ್ಕಾಗಿ ಹಾಗೂ ನಮ್ಮ ದೇಶದ ಐಕ್ಯತೆ, ಸಮಗ್ರತೆಗಾಗಿ ಒಗ್ಗಟ್ಟಾಗಿದ್ದೇವೆ. ಮಾನವೀಯತೆಯ ವಿರೋಧಿ ಅಲ್‌ ಖೈದಾ ಸಂಘಟನೆಗೆ ಭಾರತದ ಅಂತರಿಕ ವಿಚಾರದಲ್ಲಿ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.

ನಮ್ಮದು ಸಂವಿಧಾನ ಒಪ್ಪಿರುವ ಪ್ರಜಾಪ್ರಭುತ್ವ ರಾಷ್ಟ್ರ. ಉಗ್ರ ಸಂಘಟನೆಗಳ ಯಾವುದೇ ಉಪದೇಶ ನಮಗೆ ಅವಶ್ಯಕತೆಯಿಲ್ಲ. ರಾಜ್ಯದಲ್ಲಿ ಕೋಮು ಗಲಭೆ ಹುಟ್ಟುಹಾಕಿ ಅಮಾಯಕರ ಸಾವು-ನೋವು ಆಗಲೆಂದು ಕೆಲವು ಕಾಣದ ಕೈಗಳು ಹಾಗೂ ಸಂಘಟನೆಗಳು ಪ್ರೇರೇಪಿಸುತ್ತಿದ್ದು ಅಂತವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next