Advertisement

ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ

03:42 PM Oct 25, 2021 | Team Udayavani |

ಸಕಲೇಶಪುರ: ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ 7ನೇ ಅವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯ ಜಿದ್ದಾಜಿದ್ದಿನ ಹಣಾಹಣಿಯ  ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಸೋತ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಾಳ್ಳುಪೇಟೆಯ ಅಭಿಮಾನಿಯೊಬ್ಬರು ಟಿವಿಯನ್ನು ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಗ್ರಾಮದ  ಬಿಎಂ ರಸ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಸಂದೇಶ್ ಎಂಬುವರು ತಾವು ನೋಡುತ್ತಿದ್ದ 28 ಇಂಚಿನ ಎಲ್ ಇಡಿ ಟಿವಿಯನ್ನು ಕೈಗೆ ಸಿಕ್ಕಿದ ವಸ್ತುವಿನಿಂದ ಹೊಡೆದು ಹಾಕಿದ್ದಾರೆ.

ಇದನ್ನೂ ಓದಿ: ಮಡಿಕೇರಿ: ಪಾಕ್ ವಿರುದ್ಧ ಭಾರತಕ್ಕೆ ಸೋಲು; ಹೃದಯಾಘಾತದಿಂದ ಕ್ರೀಡಾಭಿಮಾನಿ ಸಾವು

ಭಾನುವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲಿದೆ ಎಂಬ ಮಹದಾಸೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಆದರೆ ಪಂದ್ಯದಲ್ಲಿ ಭಾರತದ 10 ವಿಕೆಟ್ ಗಳಿಂದ ಪಾಕಿಸ್ತಾನಕ್ಕೆ ಶರಣಾಗಿದ್ದು ಅಭಿಮಾನಿಗಳಲ್ಲಿ ಬೇಸರ ತರಿಸಿತು.

Advertisement

ಸಂದೇಶ್ ಕೂಡ ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿದ್ದರು. 20 ಓವರುಗಳಲ್ಲಿ ಒಳಗೆ ವಿಕೆಟ್ ಸಹ ಕಬಳಿಸದೆ ಕಳಪೆ ಪ್ರದರ್ಶನ ತೋರಿಸಿ ಭಾರತ ತಂಡ ಸೋತ ಹಿನ್ನೆಲೆಯಲ್ಲಿ ಟಿವಿಯನ್ನು ಒಡೆದು ಹಾಕುವ ಮೂಲಕ ತಮ್ಮ ಸಿಟ್ಟು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದರು. ಜೊತೆಗೆ ತಾವೆಂದೂ ಕ್ರಿಕೆಟ್ ನೋಡುವುದಿಲ್ಲ ಎಂದು ಶಪಥ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next