Advertisement

ಸಕಲೇಶಪುರ : ಬೈಕ್ ಗಳ ನಡುವೆ ಡಿಕ್ಕಿ, ನಾಲ್ವರಿಗೆ ಗಾಯ, ಇಬ್ಬರ ಪರಿಸ್ಥಿತಿ ಗಂಭೀರ

08:34 PM Nov 10, 2021 | Team Udayavani |

ಸಕಲೇಶಪುರ : ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ನಾಲ್ವರು ಗಂಭೀರ ರೀತಿಯಲ್ಲಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಳ್ಳುಪೇಟೆ ಸಮೀಪದ ಜೆಪಿ ನಗರದಲ್ಲಿ ನಡೆದಿದೆ.
ಹಾಸನ ನಗರದ ಪೆನ್ಷನ್ ಮೊಹಲ್ಲ ಬಡಾವಣೆಯ   ಮೆಹಬೂಬ್ (21),  ಸೈಯದ್ (20) ,ರಜಾಕ್ (20), ಜುನೈದ್ (21)ಎಂಬವರು ಗಾಯಗೊಂಡಿರುವ ಯುವಕರಾಗಿದ್ದಾರೆ.

Advertisement

ಹಾಸನದಿಂದ ಮಂಜ್ರಬಾದ್ ಕೋಟೆ ನೋಡಲು ಇಂದು ಬೆಳಿಗ್ಗೆ ಬೈಕ್ ಮೂಲಕ ಬಂದು ಹಿಂತಿರುಗುವ ಸಂದರ್ಭದಲ್ಲಿ ಜೆಪಿ ನಗರದಲ್ಲಿ ಪರಸ್ಪರ ಸ್ನೇಹಿತರ ಎರಡು ಬೈಕ್ ಗಳ ನಡುವೆ ಡಿಕ್ಕಿ ಹೊಡೆದಿದೆ.  ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೈಕುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಿಟ್ ಕಾಯಿನ್ ವಿಚಾರದಲ್ಲಿ ಪ್ರಿಯಾಂಕಾ ಖರ್ಗೆ ಆರೋಪಕ್ಕೆ ನನ್ನ ಸಹಮತವಿದೆ : ಪರಮೇಶ್ವರ್

Advertisement

Udayavani is now on Telegram. Click here to join our channel and stay updated with the latest news.

Next