Advertisement

ವಿಜ್ಞಾನದಿಂದ ವೈಚಾರಿಕ ಮನೋಭಾವ

07:51 PM Feb 29, 2020 | Naveen |

ಸೈದಾಪುರ: ವಿಜ್ಞಾನದಿಂದ ವೈಚಾರಿಕ ಮನೋಭಾವ ಬೆಳೆಯುತ್ತದೆ. ಸರಿ ತಪ್ಪುಗಳನ್ನು ಗುರುತಿಸಿ ಸೃಜನಶೀಲತೆ ಮೂಲಕ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ ಹೇಳಿದರು.

Advertisement

ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ದಿಸೆಯಲ್ಲಿ ಸೃಜನಶೀಲತೆ ಅಳವಡಿಸಿಕೊಂಡರೆ ಹೊಸ ಬದುಕು ಕಾಣಲು ಸಾಧ್ಯವಾಗುತ್ತದೆ. ಇದಕ್ಕೆ ವಿಜ್ಞಾನ ನೆರವಾಗಿದೆ ಎಂದು ತಿಳಿಸಿದರು.

ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ ಮಾತನಾಡಿ, ಸರ್‌.ಸಿ.ವಿ. ರಾಮನ್‌ 1928 ಫೆ. 28ರಂದು ಇಪೆಕ್ಟ್ ಅಧ್ಯಯನ ಮುಖಾಂತರ ವಿಜ್ಞಾನದಲ್ಲಿನ ಮಹತ್ವವನ್ನು ಜಗತ್ತಿಗೆ ತಿಳಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ವಿಜ್ಞಾನ ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ಮಾನವೀಯ
ಮೌಲ್ಯಗಳೊಂದಿಗೆ ಇದನ್ನು ಕಂಡುಕೊಳ್ಳಬೇಕು. ಕಲಿಕೆಗಾಗಿ, ಬದುಕಿಕಾಗಿ, ಸಹಬಾಳ್ವೆಗಾಗಿ ಅಲ್ಲದೇ ಆರೋಗ್ಯವಂತ ಜೀವನ ಸೇರಿದಂತೆ ಉತ್ತಮ ಪರಿಸರಕ್ಕಾಗಿ ವೈಜ್ಞಾನಿಕ ಜ್ಞಾನ ಮುಖ್ಯವಾಗಿದೆ ಎಂದು ಹೇಳಿದರು.

ಇದಕ್ಕೂ ಮುಂಚೆ ಸರ್‌. ಸಿ.ವಿ.ರಾಮನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉಪನ್ಯಾಸಕ ಹಂಪಣ್ಣ ಸಜ್ಜನಶೆಟ್ಟಿ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಇತರರು ಇದ್ದರು .

Advertisement
Advertisement

Udayavani is now on Telegram. Click here to join our channel and stay updated with the latest news.

Next