Advertisement

ಶಹಾಬುದ್ದೀನ್‌ನನ್ನು ವಾರದಲ್ಲಿ  ತಿಹಾರ್‌ ಜೈಲಿಗೆ ವರ್ಗಾಯಿಸಿ

03:45 AM Feb 16, 2017 | Harsha Rao |

ನವದೆಹಲಿ: ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿಗೆ ಗುರಿಯಾಗಿರುವ ಆರ್‌ಜೆಡಿಯ ಮಾಜಿ ಸಂಸದ ಮೊಹಮ್ಮದ್‌ ಶಹಾಬುದ್ದೀನ್‌ನನ್ನು ನವದೆಹಲಿಯ ತಿಹಾರ್‌ ಜೈಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್‌ ಬುಧವಾರ ಆದೇಶ ನೀಡಿದೆ. ಒಂದು ವಾರದ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯವಾಗಬೇಕೆಂದು ನ್ಯಾ.ದೀಪಕ್‌ ಮಿಶ್ರಾ ಮತ್ತು ನ್ಯಾ.ಅಮಿತಾವಾ ರಾಯ್‌ ಅವರನ್ನೊಳಗೊಂಡ ಪೀಠ ಬಿಹಾರ ಸರ್ಕಾರಕ್ಕೆ ಆದೇಶ ನೀಡಿದೆ. ಆತನ ವಿರುದ್ಧದ ಪ್ರಕರಣಗಳನ್ನು ಉಲ್ಲೇಖೀಸಿದ ನ್ಯಾಯಪೀಠ ಇದುವರೆಗೆ 75 ಪ್ರಕರಣಗಳಲ್ಲಿ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಕ್ಕೆ ಗುರಿಯಾದ ವ್ಯಕ್ತಿ ವಿಚಾರಣೆಯ ಮೂಲ ಹಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವಂತಾಗಬಾರದು ಎಂದು ಹೇಳಿದೆ. ಶಹಾಬುದ್ದೀನ್‌ನಿಂದ ಹತ್ಯೆಗೊಳಗಾಗಿದ್ದಾರೆಂದು ಹೇಳಲಾದ ಪತ್ರಕರ್ತನ ಪತ್ನಿ ಮತ್ತು ಮೂವರು ಮಕ್ಕಳನ್ನು ಕಳೆದುಕೊಂಡ ಚಂದ್ರಕೇಶ್ವರ್‌ ಪ್ರಸಾದ್‌ ಎಂಬುವರು ಸುಪ್ರೀಂಕೋರ್ಟಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next