Advertisement

ಹಣ್ಣು-ತರಕಾರಿ ಮಾರಾಟ ನೀತಿ ಮರುಪರಿಶೀಲಿಸಿ

04:36 PM Apr 20, 2020 | Naveen |

ಸಾಗರ: ಹಣ್ಣು-ತರಕಾರಿ ಮಾರಾಟಕ್ಕೆ ಸಂಬಂಧಿಸಿ ತಾಲೂಕು ಆಡಳಿತ ಜಾರಿಗೊಳಿಸಿರುವ ನೀತಿ ರೈತರಿಗೆ ಮಾರಕವಾಗಿದ್ದು, ತಕ್ಷಣ ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಭಾನುವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಹಣ್ಣು ಮತ್ತು ತರಕಾರಿಗಳನ್ನು ಬಡಾವಣೆಗಳಿಗೆ ಹೋಗಿ ಮಾರಾಟ ಮಾಡುವಂತೆ ಆಡಳಿತ ಸೂಚನೆ ನೀಡಿದೆ. ನಗರದ 31 ವಾರ್ಡ್‌ಗಳಿಗೆ ತರಕಾರಿ-ಹಣ್ಣು ತೆಗೆದುಕೊಂಡು ಹೋಗಲು ಬೇಕಾದಷ್ಟು ತಳ್ಳುಗಾಡಿಗಳು ನಮ್ಮಲ್ಲಿ ಇಲ್ಲ. ಇಷ್ಟು ದಿನ ನಿಗದಿಪಡಿಸಿದ ಸಮಯದಲ್ಲಿ ಒಂದು ಕಡೆ ಸಿಗುತ್ತಿದ್ದ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಅದನ್ನು ಹಿಂಪಡೆದಿರುವುದರಿಂದ ಜನರು ತರಕಾರಿ, ಹಣ್ಣು ಕೊಳ್ಳಲು ಸಾಧ್ಯವಾಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿ ತಿಳಿಸಲಾಗಿದೆ. ಭಾನುವಾರ ತರಕಾರಿ ಮಾರಾಟ ಮಾಡುತ್ತಿದ್ದ ರೈತರನ್ನು ಓಡಿಸಿರುವುದು ಖಂಡನೀಯ. ಹಣ್ಣಿನ ಅಂಗಡಿ ಬಾಗಿಲು ತೆಗೆಯಲು ಅವಕಾಶ ಕೊಡದೆ ಇರುವುದರಿಂದ ಹಣ್ಣುಗಳು ಕೊಳೆಯುತ್ತಿವೆ. ಇದರಿಂದ, ವ್ಯಾಪಾರಸ್ಥರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾ ಧಿಕಾರಿಗಳು ಹೊರಡಿಸಿರುವ ಆದೇಶ ರಾಜ್ಯ ಸರ್ಕಾರದ ಆದೇಶದ ಉಲ್ಲಂಘನೆಯೂ ಆಗಿದೆ. ತಕ್ಷಣ ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಹಿಂದಿನಂತೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಕುಗ್ವೆ, ಪ್ರಮುಖರಾದ ಎಚ್‌.ಬಿ.ರಾಘವೇಂದ್ರ, ಮನೋಜ್‌ ಕುಗ್ವೆ, ಎಚ್‌.ಎಲ್‌.ರಾಘವೇಂದ್ರ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next