Advertisement

ಸಾಗರ್‌ ಕವಚ ಕಾರ್ಯಾಚರಣೆ ಮುಕ್ತಾಯ

07:50 PM Nov 08, 2019 | mahesh |

ಮಹಾನಗರ: ಅಂತರಿಕ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ಪೊಲೀಸ್‌ ಇಲಾಖೆ, ನೌಕಾದಳ, ಕೋಸ್ಟ್‌ಗಾರ್ಡ್‌ ಹಾಗೂ ಕರಾವಳಿ ಕಾವಲು ಪೊಲೀಸ್‌ ಪಡೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಎರಡು ದಿನಗಳ ಸಾಗರ್‌ ಕವಚ ಅಣಕು ಭದ್ರತಾ ಕಾರ್ಯಾಚರಣೆ ಗುರುವಾರ ಮುಕ್ತಾಯಗೊಂಡಿತು.

Advertisement

ಬುಧವಾರ ಬೆಳಗ್ಗೆ 6ರಿಂದ ಆರಂಭಗೊಂಡಿದ್ದ ಕಾರ್ಯಾಚರಣೆ ಗುರುವಾರ ಸಂಜೆ 6ರ ವರೆಗೆ ನಗರದ ವಿವಿಧೆಡೆ ನಡೆದಿದ್ದು ನಗರದ ಮಾಲ್‌, ಮಾರುಕಟ್ಟೆ , ಬಸ್‌-ರೈಲು ನಿಲ್ದಾಣ, ಜನ ಸಂದಣಿ ಪ್ರದೇಶ, ಬಂದರು, ಕಡಲ ತೀರ ಪ್ರದೇಶಗಳು ಮುಂತಾದೆಡೆ ಪೊಲೀಸರು ಕಟ್ಟೆಚ್ಚರ ವಹಿಸಿ ತನಿಖೆ ನಡೆಸಿದರು.

ಪಾಂಡೇಶ್ವರ ಪೊಲೀಸರು ಗುರುವಾರ ನಡೆಸಿದ ಅಣುಕು ಕಾರ್ಯಾಚರಣೆಯಲ್ಲಿ ಮಧ್ಯಾಹ್ನ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ, ಖಾಸಗಿ ಹೊಟೇಲ್‌ ಎದುರು ತಿರುಗಾಡುತ್ತಿದ್ದ ರೆಡ್‌ಫೋರ್ಸ್‌ ಟೀಮ್‌ನ 6ರಿಂದ 8 ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next