Advertisement

ಸಾಗರ: ಹಲ್ಕೆ ಮುಪ್ಪಾನೆ ಲಾಂಚ್ ಪುನರಾರಂಭ

07:11 PM Jul 01, 2022 | Vishnudas Patil |

ಸಾಗರ: ತಾಲೂಕಿನ ತುಮರಿ ಭಾಗದ ಕರೂರು ಹೋಬಳಿಯಿಂದ ಕಾರ್ಗಲ್, ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ ಮುಪ್ಪಾನೆ ಲಾಂಚ್ ಮಾರ್ಗ ಶುಕ್ರವಾರದಿಂದ ಪುನರಾರಂಭಗೊಂಡಿದೆ.

Advertisement

ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಇದ್ದುದರಿಂದ ಕಳೆದ ತಿಂಗಳು ಲಾಂಚ್ ಸಂಚಾರವನ್ನು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಸ್ಥಗಿತಗೊಳಿಸಲಾಗಿತ್ತು. ತಾಲೂಕಿನ ಬಹುಭಾಗವೂ ಸೇರಿದಂತೆ ತುಮರಿ ಪರ್ಯಾಯ ದ್ವೀಪದ ಶರಾವತಿ ಹಿನ್ನೀರು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಹೀಗಾಗಿ ನೀರಿನ ಹರಿವಿನ ಪ್ರಮಾಣ ನಿಧಾನಗತಿಯಲ್ಲಿ ಏರುತ್ತಿದ್ದು, ಲಾಂಚ್ ಸಂಚಾರಕ್ಕೆ ಅನುಕೂಲ ಆಗಿದೆ. ಹೀಗಾಗಿ ಲಾಂಚ್ ಸೇವೆ ಆರಂಭಿಸಲಾಗಿದೆ’ ಎಂದು ಕಡವು ನಿರೀಕ್ಷಕ ಧನೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next