Advertisement

ಒಂದೇ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ

04:53 PM Feb 27, 2017 | Team Udayavani |

ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಸೋತ ಭಾರತ ತಂಡದ ಬೆಂಬಲಕ್ಕೆ ಈಗ ಕ್ರಿಕೆಟ್‌ ದಿಗ್ಗಜಸಚಿನ್‌ ತೆಂಡುಲ್ಕರ್‌ ನಿಂತಿದ್ದಾರೆ. ಕೊಹ್ಲಿ ಪಡೆ ಪರ ಬ್ಯಾಟ್‌ ಬೀಸಿರುವ ಅವರು, ಒಂದೇ ಒಂದು ಟೆಸ್ಟ್‌ ಸೋಲಿನಿಂದ ಭಾರತ ತಂಡವನ್ನು ಅಳೆಯಬೇಡಿ ಎಂದು ಟೀಕಾಕಾರರಿಗೆ ಕಿವಿ ಮಾತು ಹೇಳಿದ್ದಾರೆ. ಭಾರತ ಮೊದಲ ಪಂದ್ಯ ಸೋತಿರಬಹುದು. ಸೋಲು ಎನ್ನುವುದು ಒಂದು ಪಂದ್ಯದ ಅಂಶ ಹಾಗೂ ಭಾಗವಷ್ಟೇ. ಹಾಗಂತ ಭಾರತ ಸರಣಿ ಸೋತಿದೆ ಎನ್ನುವಷ್ಟರ ಮಟ್ಟಿಗೆ ಅರ್ಥವನ್ನು ಕಲ್ಪಿಸಬೇಕಿಲ್ಲ. ಕೊಹ್ಲಿ ಪಡೆ ಪಾಲಿಗೆ ಸರಣಿ ಇನ್ನೂ ಜೀವಂತವಾಗಿದೆ. ಸರಣಿ ಕೈ ವಶ ಮಾಡಿಕೊಳ್ಳಲು ಭಾರತದ ಮುಂದೆ ಸಾಕಷ್ಟು ಅವಕಾಶಗಳಿದೆ ಎಂದು ತಿಳಿಸಿದರು.

Advertisement

ಪ್ರತಿಯೊಂದು ವಿಷಯದಲ್ಲೂ ಒಂದು ಕೆಟ್ಟ ಸಮಯ ಹಾಗೂ ಇನ್ನೊಂದು ಒಳ್ಳೆಯ ಸಮಯ ಎನ್ನುವುದು ಇರುತ್ತದೆ. ಇದೆಲ್ಲವು ನಿಮ್ಮ ಸಾಮರ್ಥ್ಯ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸುವುದಕ್ಕೆ ಎದುರಾಗುತ್ತದೆ. ಇದನ್ನೆಲ್ಲ ಮೀರಿ ನಿಂತು ಪ್ರದರ್ಶನ ನೀಡಬೇಕು. ಆಗ ನಿಜವಾದ ಕ್ರೀಡಾ ಸ್ಫೂರ್ತಿ ಹೊರಬರುತ್ತದೆ. ಇದನ್ನೇ ಭಾರತ ತಂಡ ಕೂಡ ಮುಂದಿನ ಪಂದ್ಯಗಳಲ್ಲಿ ಮಾಡಬೇಕಿದೆ. ಕಠಿಣ ಹೋರಾಟದ ಮೂಲಕ ಆಸೀಸ್‌ಗೆ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರಬಲ ಪೈಪೋಟಿ ನೀಡಲಿದೆ. ಭಾರತ ತಿರುಗಿ ಬೀಳಲಿದೆ ಎನ್ನುವ ಸತ್ಯ ಆಸ್ಟ್ರೇಲಿಯಾ ತಂಡಕ್ಕೂ ಗೊತ್ತಿದೆ. ಈ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಸಚಿನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next