Advertisement

ತೆಂಡುಲ್ಕರ್‌ ಗುರು ನಮನ

11:10 PM Sep 05, 2019 | Team Udayavani |

ಮುಂಬಯಿ: ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ತಮ್ಮ ಕ್ರಿಕೆಟ್‌ ಗುರು ರಮಾಕಾಂತ್‌ ಅಚ್ರೇಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

Advertisement

“ಗುರುವನ್ನು ನಾವು ಶಿಕ್ಷಣ ಕೊಡುವ, ವಿದ್ಯೆಯನ್ನು ಕಲಿಸುವ ಹಂತಕ್ಕಷ್ಟೇ ಸೀಮಿತಗೊಳಿಸಬಾರದು.ನಮ್ಮ ಜೀವನದ ಅಮೂಲ್ಯ ಸಾಧನೆಯ ಹಿಂದೆಯೂ ಅವರ ಕೊಡುಗೆ ಅಪಾರ’ ಎಂದು ಸಚಿನ್‌ ತೆಂಡುಲ್ಕರ್‌ ಈ ಸಂದರ್ಭದಲ್ಲಿ ಹೇಳಿದರು.

“ನನ್ನ ಕ್ರಿಕೆಟ್‌ ಯಶಸ್ಸಿಗೆ ಗುರು ಅಚ್ರೇಕರ್ ಅವರ ಮಾರ್ಗ ದರ್ಶನವೇ ಕಾರಣ. ಅವರನ್ನು ನಾನು ಕೇವಲ ನನ್ನ ಕ್ರಿಕೆಟ್‌ ಗುರು ಎಂದು ಪರಿಗಣಿಸುವುದಿಲ್ಲ. ನನ್ನ ಜೀವನದ ಪ್ರತಿಯೊಂದು ಹೆಜ್ಜೆ ಯಲ್ಲೂ, ಪ್ರತಿಯೊಂದು ವಿಚಾರ ದಲ್ಲೂ ಅವರು ಗುರುವೇ ಆಗಿದ್ದಾರೆ’ ಎಂದು ಸಚಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next