Advertisement

ಶಾಸಕ ವಿಶ್ವನಾಥ್ ಕೊಲೆ ಸಂಚಿನ ಆರೊಪ: ಗೋಪಾಲ ಕೃಷ್ಣ ಪ್ರತಿಕ್ರಿಯೆ

07:19 PM Dec 01, 2021 | Team Udayavani |

ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ಗೋಪಾಲ ಕೃಷ್ಣ ಬುಧವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Advertisement

ಆ ಹಿನ್ನಲೆ ನಮ್ಮಲ್ಲಿ ಇಲ್ಲ,ಯಾವುದೇ ರೌಡಿಗಳನ್ನು ಸಂಪರ್ಕಿಸಿಲ್ಲ. ನಮ್ಮ ಊರು ಪಕ್ಕದಲ್ಲೇ ವಿಶ್ವನಾಥ್ ನಾನು ಅವರ ತೋಟ ಇದೆ. ಅದೇ ದಾರಿಯಲ್ಲಿ ನಾನು ನಿತ್ಯ ನಡೆಯುತ್ತೇನೆ, ಆ ರೀತಿ ಸಂಚು ಮಾಡುವ ಅಗತ್ಯ ನನಗಿಲ್ಲ ಎಂದರು.

ಇದನ್ನೂ ಓದಿ :ಗೋಪಾಲಕೃಷ್ಣ ಯಾಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ: ಎಸ್.ಆರ್.ವಿಶ್ವನಾಥ್

ನಾನು ಯಾರಿಗೂ ಕರೆ ಮಾಡಲು ಸಾಧ್ಯವೇ ಇಲ್ಲ. ಆ ವಿಡಿಯೋ ಸುಳ್ಳು, ನೂರಕ್ಕೆ 80% ಭಾಗ ಸುಳ್ಳು, ಕೆಲವು ವಿಚಾರಗಳು ನಿಜವಿರಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next