Advertisement

ನೂತನ ಸಚಿವ ಮಂಕಾಳ್ ವೈದ್ಯರನ್ನು ಸನ್ಮಾನಿಸಿದ ರಾಜಕೀಯ ಗುರು ಆರ್.ವಿ.ದೇಶಪಾಂಡೆ

07:22 PM May 27, 2023 | Team Udayavani |

ಹಳಿಯಾಳ : ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತನ್ನ ರಾಜಕೀಯ ಗುರು ಹಾಗೂ ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ನಿವಾಸಕ್ಕೆ ಇಂದು ಶನಿವಾರ ಸಂಜೆ ಆಗಮಿಸಿದ ಮಂಕಾಳ್ ವೈದ್ಯ ಅವರು ಮೊದಲು ಆರ್.ವಿ.ದೇಶಪಾಂಡೆಯವರ ಆಶೀರ್ವಾದವನ್ನು ಪಡೆದುಕೊಂಡರು.

Advertisement

ನೂತನ ಸಚಿವರಾದ ಮಂಕಾಳ್ ವೈದ್ಯರನ್ನು ಆರ್.ವಿ.ದೇಶಪಾಂಡೆಯವರು ಗೌರವಪೂರ್ವಕವಾಗಿ ಸನ್ಮಾನಿಸಿ, ಸದಾ ನಾನು ಬೆಂಬಲವಾಗಿ ಇದ್ದೇನೆ ಎಂದು ಭರವಸೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಂಕಾಳ್ ವೈದ್ಯರ ಪತ್ನಿ, ಪುತ್ರಿ, ಶಾಸಕರಾದ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಾಯಿ ಗಾಂವಕರ್ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next