Advertisement

ಮಳೆಗೆ ಗ್ರಾಮೀಣ ರಸ್ತೆಗಳು ಕೆಸರು ಗದ್ದೆ

02:17 PM Jul 18, 2022 | Team Udayavani |

ಕೆ.ಆರ್‌.ಪೇಟೆ: ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಜಿಟಿ ಜಿಟಿ ಮಳೆಪ್ರಾರಂಭವಾಗಿದ್ದು ಗ್ರಾಮೀಣ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ಹೀಗಾಗಿ ರೈತರು ತಮ್ಮಹೊಲ, ಗದ್ದೆ, ತೋಟಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಕೆಲವೆಡೆ ಭತ್ತದ ಕೊಯ್ಲು ನಡೆಯುತ್ತಿದ್ದು, ಹುಲ್ಲು, ಭತ್ತ ಸಾಗಾಣಿಕೆಗೆ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಕೆಸರು ತುಂಬಿದ ರಸ್ತೆಗಳು: ತಾಲೂಕಿನ ಯಾವುದೇ ಭಾಗಕ್ಕೆ ಹೋದರೂ ಹದಗೆಟ್ಟ ರಸ್ತೆಗಳು ಕಣ್ಣಿಗೆಬೀಳುತ್ತವೆ. ಜಡಿ ಮಳೆಯಿಂದ ರಸ್ತೆ ಗುಂಡಿಗಳಲ್ಲಿನೀರು ತುಂಬಿದ್ದು ಬೈಕ್‌ ಮತ್ತಿತರ ವಾಹನಗಳಲ್ಲಿಸಂಚರಿಸುವ ರೈತರ ಮಕ್ಕಳು ರಸ್ತೆ ಗುಂಡಿಗೆಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣಜನತೆ ಕೆಸರು ತುಂಬಿರುವ ರಸ್ತೆಗಳಲ್ಲಿ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ.

ಹದಗೆಟ್ಟ ರಸ್ತೆಗಳಿಂದ ಗ್ರಾಮೀಣ ಯುವಕರು ಆಕ್ರೋಶಭರಿತರಾಗಿದ್ದು ತಮ್ಮೂರಿನ ರಸ್ತೆಗಳ ಸ್ಥಿತಿಗತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕ್ಷೇತ್ರದ ಶಾಸಕರಾಗಿರುವ ಸಚಿವ.  ನಾರಾಯಣಗೌಡ ಸೇರಿದಂತೆ ಕಂಡೂ ಕಾಣದಂತಿರುವ ಅಧಿಕಾರಿಗಳ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ.

ತಾಲೂಕಿನ ಕುಂದನಹಳ್ಳಿ, ದೊಡ್ಡಸೋಮನಹಳ್ಳಿ, ಬೂಕನಕೆರೆ ಮುಂತಾದ ಗ್ರಾಮೀಣ ಭಾಗದ ಹದಗೆಟ್ಟ ರಸ್ತೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತಾಲೂಕಿನ ದುಸ್ಥಿತಿಯನ್ನು ಹೊರ ಜಗತ್ತಿಗೆ ಸಾರುತ್ತಿವೆ.

ದುರ್ವಾಸನೆ: ಕ್ಷಿಪ್ರವಾಗಿ ಬೆಳೆಯುತ್ತಿರುವ ಕೆ.ಆರ್‌.ಪೇಟೆ ಪಟ್ಟಣವೂ ಸಮಸ್ಯೆಗಳಿಂದಹೊರತಾಗಿಲ್ಲ. ಪಟ್ಟಣಕ್ಕೆ ಸುಸಜ್ಜಿತ ಯುಜಿಡಿ ವ್ಯವಸ್ಥೆ ಇಲ್ಲ. ಕಳೆದ 10 ವರ್ಷಗಳ ಹಿಂದೆ ಯುಜಿಡಿ ವ್ಯವಸ್ಥೆ ಕಲ್ಪಿಸಲು ಕಾಮಗಾರಿ ಮಾಡಲಾಗಿದ್ದು ಅಪೂರ್ಣಗೊಂಡಿದೆ. ಅಲ್ಲದೇ,ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಯುಜಿಡಿಯಿಂದ ಹೊರಬರುವ ಗಲೀಜಿನ ವಾಸನೆಗೆ ಪಟ್ಟಣದ ನಿವಾಸಿಗಳು ಹಿಡಿಶಾಪ ಹಾಕತೊಡಗಿದ್ದಾರೆ.

Advertisement

ಇಲ್ಲಿನ ಬಡಾವಣೆಗಳಲ್ಲಿ ವ್ಯವಸ್ಥಿತ ಒಳಚರಂಡಿಯೇ ಇಲ್ಲವಾಗಿದೆ. ಕೆಲವುಕಡೆ ರಸ್ತೆಯ ಒಂದು ಭಾಗದಲ್ಲಿ ಒಳಚರಂಡಿ ಇದ್ದರೆ ಮತ್ತೂಂದು ಭಾಗದಲ್ಲಿ ಚರಂಡಿಯಿಲ್ಲ. ಇನ್ನು ಕೆಲವು ಕಡೆ ರಸ್ತೆಯ ಎರಡೂ ಕಡೆ ಒಳಚರಂಡಿಯೇ ಇಲ್ಲದೆ ಗಲೀಜು ನೀರು ಮತ್ತುಮಳೆ ನೀರು ನಡುರಸ್ತೆಯಲ್ಲಿ ಹರಿದು ರಸ್ತೆ ಕೊರಕಲು ಉಂಟಾಗಿದೆ. ಇತ್ತೀಚೆಗೆ ಪಟ್ಟಣದಒಂದೆರಡು ರಸ್ತೆಗಳ ಗುಂಡಿ ಮುಚ್ಚಿ ಉತ್ಸಾಹ ತೋರಿದ ಪುರಸಭೆ ಮತ್ತೆ ತಣ್ಣಗಾಗಿದೆ.

ತಿರುಗಿ ನೋಡಿ: ಜು.21 ರಂದು ಸಚಿವ ನಾರಾಯಣಗೌಡರ ಹುಟ್ಟುಹಬ್ಬ. ಕೆಸಿಎನ್‌ಹುಟ್ಟು ಹಬ್ಬದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಪಟ್ಟಣಕ್ಕೆ ಆಗಮಿಸಿ ಹಲವುಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಪಟ್ಟಣಕ್ಕೆ ಬರುತ್ತಿರುವಮುಖ್ಯಮಂತ್ರಿಗಳೇ ಒಮ್ಮೆ ನಮ್ಮ ತಾಲೂಕಿನ ಗ್ರಾಮೀಣ ರಸ್ತೆಗಳ ಕಡೆ ತಿರುಗಿ ನೋಡಿ ಎಂದು ರೈತ ಮುಖಂಡ ಬೂಕನಕೆರೆ ನಾಗರಾಜು ಒತ್ತಾಯಿಸಿದ್ದಾರೆ.

ತಾಲೂಕಲ್ಲಿ ಅಭಿವೃದ್ಧಿ ಮರೀಚಿಕೆ :

ತಾಲೂಕು ಕೇಂದ್ರಕ್ಕೆ ಇರಬೇಕಾದ ಹಲವಾರು ಸೌಲಭ್ಯ ಒದಗಿಸುವಲ್ಲಿ ತಾಲೂಕು ಆಡಳಿತ, ಪುರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ವಿಫ‌ಲರಾಗಿದ್ದಾರೆ. ಅಭಿವೃದ್ಧಿಗಾಗಿಯೇ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಮಾತೃ ಪಕ್ಷ ಜೆಡಿಎಸ್‌ ತ್ಯಜಿಸಿ ಬಿಜೆಪಿ ಸೇರಿ ಪ್ರಭಾವಿ ಸಚಿವರಾಗಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಚುನಾವಣೆಯ ಸಂದರ್ಭದಲ್ಲಿ ಸಚಿವ ನಾರಾಯಣಗೌಡ ಕೆ.ಆರ್‌.ಪೇಟೆಯನ್ನು ಶಿಕಾರಿಪುರ ಮಾಡುವುದಾಗಿ ಎಲ್ಲೆಡೆ ಹೇಳುತ್ತಿದ್ದರು. ತಾಲೂಕಿನ ಸ್ಥಿತಿ ನೋಡಿ ಸಾರ್ವಜನಿಕರುಬಿ.ಎಸ್‌.ಯಡಿಯೂರಪ್ಪ ಅವರ ಶಿಕಾರಿಪುರವೂ ನಮ್ಮಕೆ.ಆರ್‌.ಪೇಟೆಯಷ್ಟೇ ಹದಗೆಟ್ಟಿದೆಯಾ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

– ಅರುಣ್‌ಕುಮಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next