Advertisement

ಮಂಗಳೂರು : ಬಸ್ ಸಿಬ್ಬಂದಿಗಳ ಈ ಕಾರ್ಯಕ್ಕೆ ಪೊಲೀಸ್‌ ಆಯುಕ್ತರಿಂದ ಶ್ಲಾಘನೆ

08:07 PM Dec 26, 2021 | Team Udayavani |
ಮಂಗಳೂರು : ಮಂಗಳೂರಿನ ಸ್ಟೇಟ್‌ಬ್ಯಾಂಕ್‌-ತಲಪಾಡಿ ನಡುವೆ ಸಂಚರಿಸುವ ಮಹೇಶ್‌ ಮೋಟರ್ ಹೆಸರಿನ ಬಸ್‌ನಲ್ಲಿ ರವಿವಾರ ಬೆಳಗ್ಗೆ 10,000 ರೂ. ನಗದು ಪತ್ತೆಯಾಗಿದೆ. ತಲಪಾಡಿಯಿಂದ ಸ್ಟೇಟ್‌ಬ್ಯಾಂಕ್‌ಗೆ ಬಸ್‌ ಬಂದಾಗ ನಿರ್ವಾಹಕ ಅಲ್ತಾಫ್ ಮತ್ತು ಚಾಲಕ ದಿನಕರ್‌ ಅವರು ಬಸ್‌ನ ಸೀಟಿನಲ್ಲಿ ಹಣ ಇರುವುದನ್ನು ಗಮನಿಸಿದರು. ಅದನ್ನು ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಗೆ ತಂದು ಒಪ್ಪಿಸಿದ್ದಾರೆ. ಬಸ್‌ ಸಿಬಂದಿಯ ಪ್ರಾಮಾಣಿಕತೆಯನ್ನು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಅವರು ಶ್ಲಾಘಿಸಿದ್ದು ಸಂಬಂಧಪಟ್ಟವರು ಹಣವನ್ನು ಆಯುಕ್ತರ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next