Advertisement
ಆಸ್ಟ್ರೇಲಿಯ ಇನ್ನಿಂಗ್ಸ್ ವೇಳೆ ಟಿಮ್ ಪೇನ್ ರನೌಟ್ ಎಂಬ ಮನವಿಯನ್ನು ಹಲವು ಕೋನಗಳಿಂದ ಪರಿಶೀಲಿಸಿದ ತೃತೀಯ ಅಂಪಾಯರ್, ಸಂಶಯದ ಲಾಭ ನೀಡಿ ನಾಟೌಟ್ ಎಂದು ಘೋಷಿಸಿದ್ದರು. ಆದರೆ ಸೋಮವಾರ ಅದೇ ರೀತಿಯ ರನೌಟ್ಗೆ ಅಜಿಂಕ್ಯ ರಹಾನೆ ಬಲಿಯಾಗಬೇಕಾಯಿತು. ಇಲ್ಲಿಯೂ ರಹಾನೆ ಬ್ಯಾಟ್ ಕ್ರೀಸ್ಗೆ ತಾಗಿರುವುದು ಸ್ಪಷ್ಟವಾಗಿತ್ತು. ಆದರೆ ರನೌಟ್ ಎಂದು ತೀರ್ಪು ನೀಡಲಾಯಿತು. ಇಲ್ಲೇಕೆ ರಹಾನೆಗೆ ಸಂಶಯದ ಲಾಭ ನೀಡಲಿಲ್ಲ ಎಂದು ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ರವೀಂದ್ರ ಜಡೇಜ ಚೆಂಡನ್ನು ಕವರ್ ಕಡೆಗೆ ತಳ್ಳಿ ಸಿಂಗಲ್ ಗಾಗಿ ಓಡಿದರು. ಆಗ ರಹಾನೆ ರನೌಟಾದರು. ಆದರೆ ಬೇಸರಿಸಲಿಲ್ಲ. ಜಡೇಜ ಅವರನ್ನು ಹುರಿದುಂಬಿಸಿ, ದೊಡ್ಡ ಮೊತ್ತ ಪೇರಿಸುವಂತೆ ಸನ್ನೆ ಮಾಡಿ ನಿರ್ಗಮಿಸಿದರು. ಈ ಕ್ರಿಕೆಟ್ ಸ್ಫೂರ್ತಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ರಹಾನೆಯಿಂದಾಗಿ ರನೌಟಾದಾಗ ಕೊಹ್ಲಿ ವರ್ತಿಸಿದ ರೀತಿಯನ್ನು ಅಭಿಮಾನಿಗಳು ಹೋಲಿಸಿ ನೋಡಿದ್ದಾರೆ.