Advertisement

ಪಾತ್ರ ಮೂರು ನಿರೀಕ್ಷೆ ನೂರು…ಚಂದನವನದ ‘ರುಕ್ಮಿಣಿ’ಜೊತೆ ಮಾತುಕತೆ

11:54 AM Jan 17, 2023 | Team Udayavani |

ಶ್ರೀನಿ ನಟನೆ ಮತ್ತು ನಿರ್ದೇಶನದ “ಬೀರ್‌ಬಲ್‌’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ ರುಕ್ಮಿಣಿ ವಸಂತ್‌. ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾದ ರುಕ್ಮಿಣಿ ವಸಂತ್‌, ಈ ವರ್ಷ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಹೌದು, ಸದ್ಯ ರುಕ್ಮಿಣಿ ವಸಂತ್‌ ಮೂರು ಸಿನಿಮಾಗಳಲ್ಲಿ ನಾಯಕಿಯಾಗಿ, ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಉದಯವಾಣಿ’ ಜೊತೆಗೆ ಮಾತನಾಡಿದ ರುಕ್ಮಿಣಿ ವಸಂತ್‌ ತಮ್ಮ ಮುಂಬರುವ ಸಿನಿಮಾಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

Advertisement

ತಮ್ಮ ಕೈಯಲ್ಲಿರುವ ಸಿನಿಮಾಗಳ ಬಗ್ಗೆ ಹೇಳಿ?

ಸದ್ಯ ಮೂರು ಸಿನಿಮಾಗಳಲ್ಲಿ ಹೀರೋಯಿನ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಗಣೇಶ್‌ ಅಭಿನಯದ “ಬಾನ ದಾರಿಯಲ್ಲಿ’, ರಕ್ಷಿತ್‌ ಶೆಟ್ಟಿ ಅಭಿನಯದ “ಸಪ್ತ ಸಾಗರದಾಚೆ ಎಲ್ಲೋ’ ಮತ್ತು ಶ್ರೀಮುರಳಿ ಅಭಿನಯದ “ಬಘೀರ’ ನಾನು ಅಭಿನಯಿಸುತ್ತಿರುವ ಮೂರು ಸಿನಿಮಾಗಳು.

ಈ ಸಿನಿಮಾಗಳಲ್ಲಿ ನಿಮ್ಮ ಪಾತ್ರಗಳು ಹೇಗಿದೆ..?

“ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಲೀಲಾ ಎಂಬ ಸ್ವಿಮ್ಮಿಂಗ್‌ ಕೋಚ್‌ ಪಾತ್ರ ನನ್ನದು. ಇನ್ನು “ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ಪ್ರಿಯಾ ಎಂಬ ಸಿಂಗರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. “ಬಘೀರ’ ಸಿನಿಮಾದಲ್ಲಿ ಸ್ನೇಹ ಎಂಬ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

Advertisement

ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ತೆರೆಗೆ?

ಬಹುಶಃ “ಬಾನ ದಾರಿಯಲ್ಲಿ’ ಸಿನಿಮಾ ಮೊದಲು ತೆರೆಗೆ ಬರುತ್ತದೆ. ಈಗಾಗಲೇ ಈ ಸಿನಿಮಾದ ಕೆಲಸಗಳು ಕಂಪ್ಲೀಟ್‌ ಆಗಿದ್ದು, ಸಿನಿಮಾದ ಪ್ರಮೋಶನ್ಸ್‌ ಕೂಡ ಜೋರಾಗಿ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮಾರ್ಚ್‌ನಲ್ಲಿ “ಬಾನ ದಾರಿಯಲ್ಲಿ’ ಸಿನಿಮಾ ರಿಲೀಸ್‌ ಆಗುತ್ತದೆ.

ಉಳಿದ ಸಿನಿಮಾಗಳು ಯಾವ ಹಂತದಲ್ಲಿದೆ?

ಸದ್ಯ “ಬಾನ ದಾರಿಯಲ್ಲಿ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಉಳಿದಂತೆ, “ಸಪ್ತ ಸಾಗರದಾಚೆ ಎಲ್ಲೋ’ ಮತ್ತು “ಬಘೀರ’ ಸಿನಿಮಾದ ಪ್ರೊಡಕ್ಷನ್‌ ಕೆಲಸಗಳು ಇನ್ನೂ ನಡೆಯುತ್ತಿದೆ. ಬಹುಶಃ ಈ ಸಿನಿಮಾಗಳು ಕೂಡ ಈ ವರ್ಷದ ಕೊನೆಯೊಳಗೆ ತೆರೆಗೆ ಬರಬಹುದು ಎಂಬ ನಿರೀಕ್ಷೆಯಿದೆ.

ನೀವು ನಿರ್ವಹಿಸುವ ಪಾತ್ರಗಳಿಗೆ ತಯಾರಿ ಹೇಗಿರುತ್ತದೆ?

ನಾನು ಸದ್ಯಕ್ಕೆ ಮಾಡುತ್ತಿರುವ ಮೂರು ಸಿನಿಮಾಗಳಲ್ಲೂ ಮೂರು ವಿಭಿನ್ನ ಪಾತ್ರಗಳಿವೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ಇಂಪಾರ್ಟೆನ್ಸ್‌ ಇದೆ. ಹಾಗಾಗಿ ಆಯಾಯ ಪಾತ್ರಗಳು ಏನೇನೂ ಡಿಮ್ಯಾಂಡ್‌ ಮಾಡುತ್ತದೆಯೋ ಅದಕ್ಕೆ ತಕ್ಕಂತೆ, ತಯಾರಿ ಮಾಡಿಕೊಂಡಿದ್ದೆ. “ಬಾನ ದಾರಿಯಲ್ಲಿ’ ಸಿನಿಮಾದ ಪಾತ್ರಕ್ಕಾಗಿ ಸರ್ಫಿಂಗ್‌ ಕಲಿಯಬೇಕಾಯಿತು. ಉಳಿದಂತೆ “ಸಪ್ತ ಸಾಗರದಾಚೆ ಎಲ್ಲೋ’ ಮತ್ತು “ಬಘೀರ’ ಸಿನಿಮಾದ ಪಾತ್ರಗಳಿಗೂ ರಿಹರ್ಸಲ್‌, ವರ್ಕ್‌ಶಾಪ್‌ ಮಾಡಿಕೊಂಡಿದ್ದೆ.

ಸ್ಟಾರ್ ಜೊತೆ ಅಭಿನಯಿಸುತ್ತಿರುವ ಅನುಭವ ಹೇಗಿದೆ?

ತುಂಬ ಚೆನ್ನಾಗಿದೆ. “ಬಾನ ದಾರಿಯಲ್ಲಿ ಸಿನಿಮಾದಲ್ಲಿ ಮೊದಲ ಬಾರಿಗೆ ಗಣೇಶ್‌ ಅವರೊಂದಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುವ ಚಾನ್ಸ್‌ ಸಿಕ್ಕಿತು. ನಂತರ ರಕ್ಷಿತ್‌ ಶೆಟ್ಟಿ, ಅದಾದ ನಂತರ ಶ್ರೀಮುರಳಿ ಅವರಂಥ ಬಿಗ್‌ ಸ್ಟಾರ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬರಿಂದಲೂ ಸಾಕಷ್ಟು ಕಲಿತಿದ್ದೇನೆ. ಇನ್ನೂ ಕಲಿಯುವುದು ಸಾಕಷ್ಟಿದೆ. ಗಣೇಶ್‌, ರಕ್ಷಿತ್‌ ಶೆಟ್ಟಿ, ಶ್ರೀಮುರಳಿ ಬಿಗ್‌ ಸ್ಟಾರ್ ಆದರೂ ಅವರ ಸಿಂಪ್ಲಿಸಿಟಿ ಎಲ್ಲರಿಗೂ ಮಾದರಿಯಾಗುವಂಥದು

Advertisement

Udayavani is now on Telegram. Click here to join our channel and stay updated with the latest news.

Next