Advertisement

ವಂಡ್ಸೆ:ಮಹಿಳೆ ಜತೆ ಅಸಭ್ಯ ವರ್ತನೆ,ಆಕ್ರೋಶ;ಉದ್ವಿಗ್ನ ಸ್ಥಿತಿ

10:18 AM Mar 09, 2018 | |

ಕುಂದಾಪುರ: ವಂಡ್ಸೆ ಕೆಳಪೇಟೆಯಲ್ಲಿ ಚಪ್ಪಲಿ ಖರೀದಿಗೆ ಬಂದ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ  ಅಂಗಡಿ ಮಾಲಕನ ವಿರುದ್ಧ ಗುರುವಾರ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ  ಸದ್ದಾಂನನ್ನು ಬಂಧಿಸಲು ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು  ಮತ್ತು ಕಾರ್ಯಕರ್ತರು ಪೇಟೆಯಲ್ಲಿ ಜಮಾಯಿಸಿದ್ದರು. 

Advertisement

ಬುಧವಾರ ಸಂಜೆ ಘಟನೆ ಸಂಭ ವಿಸಿದ್ದು, ಗುರುವಾರ  ಅಂಗಡಿಗೆ ಬಾಗಿಲು ಹಾಕಿ  ಆರೋಪಿ ಪರಾರಿ ಯಾಗಿದ್ದ.  ಇದರಿಂದ ಆಕ್ರೋಶ ಗೊಂಡ ಬಿಜೆಪಿ ಕಾರ್ಯಕರ್ತರು ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ವಂಡ್ಸೆ ಪೇಟೆಯಲ್ಲಿ ಸೇರಿದ್ದರು. 

ಆರೋಪಿ ಬಂಧನಕ್ಕೆ ಗಡುವು
ಆರೋಪಿಯನ್ನು ಶುಕ್ರವಾರ ಮಧ್ಯಾಹ್ನದೊಳಗೆ ಬಂಧಿಸದಿದ್ದಲ್ಲಿ ಉಗ್ರ  ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ತಿಳಿಸಿವೆ. ಭದ್ರತೆಗಾಗಿ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 

ಖಂಡನೆ
ಅನ್ಯಕೋಮಿನ ವ್ಯಕ್ತಿಯು ಮಹಿಳೆ ಜತೆ  ಅಸಭ್ಯವಾಗಿ ವರ್ತಿಸಿರುವುದು ರಾಜ್ಯದ ಕಾನೂನು ಅವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ. ಸುಕುಮಾರ್‌ ಶೆಟ್ಟಿ ಹೇಳಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next