Advertisement

ಆರ್‌ಟಿಒ ಕಿರುಕುಳ: ಖಾಸಗಿ ಬಸ್‌ ಮಾಲಿಕರ ಪ್ರತಿಭಟನೆ

12:12 PM Jan 17, 2017 | Team Udayavani |

ಕೆ.ಆರ್‌.ಪುರ: ಖಾಸಗಿ ಬಸ್ಸುಗಳಿಗೆ ವಿನಾಕಾರಣ ಆರ್‌ಟಿಒ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನರೇಂದ್ರಮೋದಿ ಆರ್ಮಿ ಕಾರ್ಯಕರ್ತರು ಹಾಗೂ ಖಾಸಗಿ ಬಸ್ಸುಗಳ ಮಾಲಿಕರು ಆರ್‌ಟಿಒ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನರೇಂದ್ರಮೋದಿ ಆರ್ಮಿ ಸಂಘಟನೆಯ ಅಧ್ಯಕ್ಷ ಚಿನ್ನಪ್ಪ ಚಿಂತಾಮಣಿ, ಕೋಲಾರ, ಮಾಲೂರು, ಮಾಸ್ತಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿಗೆ ತಲುಪುವ ಖಾಸಗಿ ಬಸ್‌ಗಳ ಪರವಾನಿಗೆ ಸೇರಿದಂತೆ ಮತ್ತಿತ್ತರ ದಾಖಲಾತಿಗಳು ಸಮರ್ಪಕವಾಗಿದರೂ ಕೆ.ಆರ್‌.ಪುರ ಆರ್‌ಟಿಒ ಅಧಿಕಾರಿಗಳು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಕೆ.ಆರ್‌.ಪುರ ಟಿನ್‌ಫ್ಯಾಕ್ಟರಿ ಮೂಲಕ ನಗರಕ್ಕೆ ತೆರಳುತ್ತಿದ್ದೇವೆ ಇದನ್ನೇ ಕಾರಣವಾಗಿಸಿಕೊಂಡು ಅಧಿಕಾರಿಗಳು ಖಾಸಗಿ ಬಸ್ಸುಗಳನ್ನು ಜಪ್ತಿ ಮಾಡುವುದಲ್ಲದೆ ಚಾಲಕರನ್ನು ಆವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಬಸ್ಸುಗಳು ಮಾಲಿಕರು ಮತ್ತು ಚಾಲಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮನವಿ ನೀಡಿದ್ದಾರೆ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳ ಲಾಗುವುದು.
-ಹಾಲಸ್ವಾಮಿ, ಕೆ.ಆರ್‌.ಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next