Advertisement

ಉತ್ತರಪ್ರದೇಶ: ಗುಂಡಿಕ್ಕಿ RSS ನಾಯಕನ ಬರ್ಬರ ಹತ್ಯೆ 

11:36 AM Oct 21, 2017 | Team Udayavani |

ಗಾಜೀಪುರ : ಇಲ್ಲಿ  ಶನಿವಾರ ಬೆಳ್ಳಂಬೆಳಗ್ಗೆ ನಡೆದ ಬೆಚ್ಚಿ ಬೀಳುವ ಘಟನೆಯೊಂದರಲ್ಲಿ ಆರ್‌ಎಸ್‌ಎಸ್‌ ನಾಯಕ, ಸ್ಥಳೀಯ ಪತ್ರಕರ್ತನಾಗಿದ್ದ ರಾಜೇಶ್‌ ಮಿಶ್ರಾ ಎನ್ನುವವರನ್ನು ಕಚೇರಿಗೆ ನುಗ್ಗಿ ದುಷ್ಕರ್ಮಿಗಳು ಬರ್ಬರವಾಗಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ದುಷ್ಕರ್ಮಿಗಳ ದಾಳಿ ವೇಳೆ ಸœಳದಲ್ಲಿದ್ದ ರಾಜೇಶ್‌ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದು, ರಾಜೇಶ್‌ ಮಿಶ್ರಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಹೋದರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸರು ದೌಡಾಯಿಸಿ ಕೊಲೆಗಡುಕರ ಪತ್ತೆಗೆ ತಂಡಗಳನ್ನು ರಚಸಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 

ನಾಲ್ಕು ದಿನಗಳ ಹಿಂದೆ ಪಂಜಾಬ್‌ನ ಲೂಧಿಯಾನದಲ್ಲೂ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರ ಹತ್ಯೆ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next