Advertisement

ಆರ್‌ಎಸ್‌ಎಸ್‌ ಕಾರ್ಯಕರ್ತ ಅನುಮಾನಾಸ್ಪದ ಸಾವು

07:48 PM Jul 25, 2022 | Team Udayavani |

ತಿರುವನಂತಪುರ: ಆರ್‌ಎಸ್‌ಎಸ್‌ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

Advertisement

ಆರ್‌ಎಸ್‌ಎಸ್‌ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಜಗಳದ ಬೆನ್ನಲ್ಲೇ ಈ ಸಾವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಕಣ್ಣೂರಿನ ಪನುಂದಾ ಪ್ರದೇಶದಲ್ಲಿ ಸೋಮವಾರ ಘರ್ಷಣೆ ನಡೆದಿದೆ.ಅಸುನೀಗಿರುವ ಕಾರ್ಯಕರ್ತ ಅದೇ ಸ್ಥಳದಲ್ಲಿದ್ದರಾದರೂ ಜಗಳದಲ್ಲಿ ಭಾಗಿಯಾಗಿರಲಿಲ್ಲ. ಜಗಳದಲ್ಲಿ ಗಾಯಗೊಂಡಿದ್ದ ಕಾರ್ಯಕರ್ತರನ್ನು ಅಸುನೀಗಿರುವ ವ್ಯಕ್ತಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆಗ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಸಿಪಿಎಂನವರೇ ಕಾರ್ಯಕರ್ತನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರ್‌ಎಸ್‌ಎಸ್‌ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next