Advertisement

ಆರೆಸ್ಸೆಸ್ ಆಡಳಿತ ಸಾಂವಿಧಾನಿಕ ಮೌಲ್ಯಗಳಿಗೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲ: ಪಿಣರಾಯಿ ವಿಜಯನ್

02:54 PM Jan 30, 2023 | Team Udayavani |

ತಿರುವನಂತಪುರಂ : ಮಹಾತ್ಮಾ ಗಾಂಧಿಯವರ ಕೊನೆಯ ನಂತರ ನಿಷೇಧಕ್ಕೊಳಗಾದ ಆರ್‌ಎಸ್‌ಎಸ್ ಈಗ ರಾಷ್ಟ್ರದ ಸಾಂವಿಧಾನಿಕ ಮೌಲ್ಯಗಳಿಗೆ ಕಡಿಮೆ ಗೌರವ ನೀಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಹುತಾತ್ಮರ ದಿನವಾಗಿ ಆಚರಿಸಲಾಗುವ ಗಾಂಧಿಯವರ 75 ನೇ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಜಯನ್, ರಾಷ್ಟ್ರದ ಪಿತಾಮಹನನ್ನು “ಧಾರ್ಮಿಕ ಮತಾಂಧ” ಹತ್ಯೆ ಮಾಡಿದಾಗಇಡೀ ಭಾರತದ ಕಲ್ಪನೆಗೆ ಗಾಯವಾಯಿತು ಎಂದು ಹೇಳಿದ್ದಾರೆ.

ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿಜಯನ್, ಹಿಂದೂ ರಾಷ್ಟ್ರೀಯತಾವಾದಿಗಳು ಬಹುಮತೀಯ ಪಂಥದ ಬೆದರಿಕೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದ ಗಾಂಧಿಯನ್ನು ಯಾವಾಗಲೂ ಶತ್ರು ಎಂದು ಪರಿಗಣಿಸುತ್ತಾರೆ. ಗಾಂಧಿ ತಮ್ಮ ಕೊನೆಯ ಉಸಿರು ಇರುವವರೆಗೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ನಿಂತಿದ್ದರು. ಅವರು ಕಲ್ಪಿಸಿಕೊಂಡ ಭಾರತವು ಪ್ರತಿಯೊಂದು ಅಂಶದಲ್ಲೂ ಸಂಘಪರಿವಾರದ ಹಿಂದುತ್ವ ರಾಷ್ಟ್ರ ಪರಿಕಲ್ಪನೆಗೆ ವಿರುದ್ಧವಾಗಿದೆ. ಗಾಂಧೀಜಿಯನ್ನು ನಾಥೂರಾಂ ವಿನಾಯಕ್ ಗೋಡ್ಸೆ ಎಂಬ ಧಾರ್ಮಿಕ ಮತಾಂಧನು ಗುಂಡಿಕ್ಕಿ ಕೊಂದಾಗ ಭಾರತದ ಕಲ್ಪನೆಯೇ ಘಾಸಿಗೊಂಡಿತು” ಎಂದು ಬರೆದಿದ್ದಾರೆ.

ದ್ವೇಷ ಮತ್ತು ವಿಭಜಕ ರಾಜಕೀಯವನ್ನು ಬಳಸಿಕೊಂಡು ಸಂಘಪರಿವಾರವು ದೇಶದಲ್ಲಿ ತನ್ನ ರಾಜಕೀಯ ಗುರಿಗಳನ್ನು ಸಾಧಿಸುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next