Advertisement

RSS, BJP ಯಿಂದಲೇ ಪ್ರತಿಮೆ ಧ್ವಂಸಕ್ಕೆ ಸೂಚನೆ: ರಾಹುಲ್‌

03:49 PM Mar 20, 2018 | Team Udayavani |

ಹೊಸದಿಲ್ಲಿ : ಆರ್‌ಎಸ್‌ಎಸ್‌ ಮತ್ತು ಬಿಜೆಪಿ ತನ್ನ ಕೇಡರ್‌ಗಳಿಗೆ ಪ್ರತಿಮೆ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

Advertisement

ತ್ರಿಪುರ ಚುನಾವಣಾ ಫ‌ಲಿತಾಂಶದ ಬಳಿಕ ದೇಶಾದ್ಯಂತ ವಿವಿಧೆಡೆ ವಿವಿಧ ಹಿರಿಯ ನಾಯಕರ ಪ್ರತಿಮೆಗಳನ್ನು ಒಂದರ ಬಳಿಕ ಒಂದಾಗಿ ನಾಶಪಡಿಸಲಾಗಿದೆ ಇಲ್ಲವೇ ಹಾನಿಗೊಳಿಸಲಾಗಿದೆ ಎಂದವರು ಹೇಳಿದರು. 

ಮೊದಲು ತ್ರಿಪುರದಲ್ಲಿ ವ್ಲಾದಿಮಿರ್‌ ಲೆನಿನ್‌ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು; ಅನಂತರ ತಮಿಳು ನಾಡಿನ ಪುದುಕೋಟೆಯಲ್ಲಿ ಪೆರಿಯಾರ್‌ ರಾಮಸ್ವಾಮಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಯಿತು ಎಂದು ಹೇಳಿದ ರಾಹುಲ್‌ ಗಾಂಧಿ, ಇದಕ್ಕೆಲ್ಲ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳೇ ಕಾರಣ ಎಂದು ದೂರಿದರು. 

ಈ ನಡುವೆ ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ಪೆರಿಯಾರ್‌ ಪ್ರತಿಮೆಯ ತಲೆ ಕಡಿದಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ. ಇದಕ್ಕೆ ಮೊದಲು ಮಾರ್ಚ್‌ ಆದಿಯಲ್ಲಿ ಪೆರಿಯಾರ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು – ಒಬ್ಟಾತ ಬಿಜೆಪಿಯವ ಮತ್ತು ಇನ್ನೊಬ್ಟಾತ ಸಿಪಿಎಂ ನವ – ಪೊಲೀಸರು ತಮಿಳು ನಾಡಿನ ತಿರುಪತ್ತೂರಿನಲ್ಲಿ ಬಂಧಿಸಿದ್ದಾರೆ. 

ಕಳೆದ ವಾರ ಅಸ್ಸಾಮಿನ ಕೋಕ್ರಜಾರ್‌ನಲ್ಲಿ  ಶ್ಯಾಮ್‌ ಪ್ರಸಾದ್‌ಮುಖರ್ಜಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಈ ತಿಂಗಳ ಆದಿಯಲ್ಲಿ ಕೋಲ್ಕತದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ಜನಸಂಘದ ಇನ್ನೋರ್ವ ನಾಯಕನ ಪ್ರತಿಮೆಯನ್ನು ನಾಶಪಡಿಸಲಾಗಿತ್ತು. ಈ ಸಂಬಂಧ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next