Advertisement

RSS; ಮಾ.15-17ರವರೆಗೆ ಅಖಿಲ ಭಾರತೀಯ ಪ್ರತಿನಿಧಿ ಸಭಾ

11:42 PM Mar 01, 2024 | Team Udayavani |

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾ.15ರಿಂದ 17ರವರೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯಲಿದೆ.

Advertisement

ರೇಶಿಮ್‌ ಭಾಗ್‌ ನಗರದ ಸ್ಮತಿ ಭವನದಲ್ಲಿ ನಡೆಯುವ ಈ ಸಭೆಯಲ್ಲಿ 2023-24ರಲ್ಲಿ ಸಂಘ ಕೈಗೊಂಡ ಕಾರ್ಯಗಳ ಪುನರ್‌ವಿಮರ್ಶೆ, 2024-25ನೇ ಸಾಲಿನಲ್ಲಿ ಕೈಗೊಳ್ಳ ಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಗುತ್ತದೆ.

ಸ್ವಯಂಸೇವಕರನ್ನು ತರಬೇತು ಗೊಳಿಸುವ “ಸಂಘ ಶಿಕ್ಷ ವರ್ಗಾ’ ಯೋಜನೆಯ ಜಾರಿ ಬಗ್ಗೆಯೂ ಚರ್ಚಿಸ ಲಾಗುತ್ತದೆ. ಜತೆಗೆ ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಅಖೀಲ ಭಾರತೀಯ ಪ್ರಚಾರ ಪ್ರಮುಖ್‌ ಸುನಿಲ್‌ ಅಂಬೇಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next