Advertisement
ಪೌರಾಯುಕ್ತರಾಗಿ ಎಸ್. ಯೋಗೇಶ್ವರ ಕಾರವಾರ ನಗರಸಭೆಗೆ ಬರುವ ಮುನ್ನ ನಗರದ ಒಳ ಚರಂಡಿ ವ್ಯವಸ್ಥೆಗೆ ಕೇವಲ 224 ಅಧಿಕೃತ ಸಂಪರ್ಕಗಳಿದ್ದವು. ಇದರಲ್ಲಿ ಕೆಲ ಹೋಟೆಲ್ ಮತ್ತು ವಸತಿ ಗೃಹಗಳು, ಮನೆಗಳು ಮಾತ್ರ ಅಧಿಕೃತವಾಗಿ ನಗರಸಭೆಗೆ 2500 ಶುಲ್ಕ ತುಂಬಿ ಒಳಚರಂಡಿಗೆ ಸಂಪರ್ಕ ಪಡೆದಿದ್ದವು. ಸಾವಿರಕ್ಕೂ ಹೆಚ್ಚು ಮನೆಗಳು, ಕೆಲ ಅಪಾರ್ಟಮೆಂಟ್ಗಳ ನಿವಾಸಿಗಳು ಅಕ್ರಮವಾಗಿ ಕೊಳಚೆ ನೀರು ಬಿಡುತ್ತಿದ್ದವು. ಜೊತೆಗೆ ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲ ಎಂಬ ಆಪಾದನೆ ಕೇಳಿ ಬರುತ್ತಿತ್ತು. ಒಳ ಚರಂಡಿ ವ್ಯವಸ್ಥೆಯನ್ನೇ ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವುದು ಬೇಡ. ಕೆಯುಐಡಿಎಫ್ಸಿ ಯೋಜನೆ ವಿಫಲವಾಗಿದೆ. ಅವರು ಅದರ ನಿರ್ವಹಣೆ ಮಾಡುತ್ತಿಲ್ಲ ಎಂಬ ಆಪಾದನೆ ಜೋರಾಗಿಯೇ ಇತ್ತು. ಆದರೆ ಇದರ ಆಂತರ್ಯದ ಮರ್ಮವೇ ಬೇರೆಯಾಗಿತ್ತು. ಕೆಲ ಅಪಾರ್ಟಮೆಂಟ್ಗಳ ನಿವಾಸಿಗಳಿಗೆ ನೊಟೀಸ್ ನೀಡಿ, ಒಳಚರಂಡಿ ವ್ಯವಸ್ಥೆ ಸಂಪರ್ಕ ಕಡಿತ ಮಾಡುವ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ಕೆಯುಐಡಿಎಫ್ ಸಿಯಿಂದ ಒಳಚರಂಡಿ ವ್ಯವಸ್ಥೆಯನ್ನು ನಗರಸಭೆ ಹಸ್ತಾಂತರ ಮಾಡಿಕೊಂಡು, ಅದನ್ನು ನಿರ್ವಹಣೆ ಸಹ ಮಾಡುತ್ತಾ ಬಂದಿತ್ತು.
Related Articles
Advertisement
ಕುಡಿವ ನೀರಿನ ಬಿಲ್ ಪಾವತಿಗೆ ಕ್ರಮ: ನಗರದಲ್ಲಿ ಕುಡಿವ ನೀರು ಒದಗಿಸುತ್ತಿದ್ದರೂ ಬಿಲ್ ಪಾವತಿಗೆ ನಿರ್ಧಿಷ್ಟ ವ್ಯವಸ್ಥೆ ಇರಲಿಲ್ಲ. ಬಿಲ್ ಕೊಡುವವರು ಸಹ ಇರಲಿಲ್ಲ. ಈಗ ಕುಡಿಯುವ ನೀರಿನ ಬಿಲ್ ವಸೂಲಾತಿಗೆ ಕಂಪ್ಯೂಟರ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮನೆಗೆ ಬಿಲ್ ನೀಡಲಾಗುತ್ತಿದೆ. ತಿಂಗಳ ಬಿಲ್ ಪಾವತಿಯನ್ನು ನಗರಸಭೆಯಲ್ಲಿ ದೃಢೀಕರಿಸಿಕೊಂಡು ಬ್ಯಾಂಕ್ಗೆ ಹಣ ಪಾವತಿ ವ್ಯವಸ್ಥೆ ಇದೆ.
ತೆರಿಗೆ ವಸೂಲಿ ಪದ್ಧತಿ ಸುಧಾರಣೆ: ತೆರಿಗೆ ವಸೂಲಾತಿ ಪದ್ಧತಿ ಸುಧಾರಿಸಲಾಗಿದೆ. ನ್ಯೂ ಕೆಎಚ್ಬಿ ಕಾಲೊನಿಯ ಬಹುತೇಕ ಮನೆಗಳಿಗೆ ನಗರಸಭೆಯ ಮನೆ ನಂಬರ್ ಇಲ್ಲ. ಪ್ರತಿ ಮನೆಗೆ ನಂಬರ್ ನೀಡುವ ಅಭಿಯಾನ ನವೆಂವರ್ನಿಂದ ಪ್ರಾರಂಭವಾಗಲಿದೆ. ನಗರಸಭೆ ಅಧಿ ಕಾರಿಗಳು ಖುದ್ದಾಗಿ ಬಂದು ಮನೆ ನಂಬರ್ ನೀಡಲಿದ್ದಾರೆ. ಈಗ ತೆರಿಗೆ ಕಟ್ಟಿದ ಮಾಹಿತಿ, ಸೈಟ್ ಸಂಖ್ಯೆ ದಾಖಲಿಸಿಕೊಂಡು, ಕೆಎಚ್ಬಿ ನಗರಸಭೆಗೆ ಹಸ್ತಾಂತರವಾದ ದಿನದಿಂದ ತೆರಿಗೆ ಸಂಗ್ರಹಿಸುವ ಬಗ್ಗೆ ನಿರ್ಧಾರವಾಗಬೇಕಿದೆ. ಇಲ್ಲವೇ ಮನೆ ನಿರ್ಮಾಣದ ವರ್ಷದಿಂದ ತೆರಿಗೆ ಸಂಗ್ರಹಿಸಬೇಕೇ? ಎಂಬುದನ್ನು ಸದ್ಯವೇ ನಿರ್ಧರಿಸುವ ಸಾಧ್ಯತೆ ಇದೆ. ಈ ಅಂಶ ನಿರ್ಣಯದ ನಂತರ ನ್ಯೂ ಕೆಎಚ್ಬಿ ಪ್ರತಿ ಮನೆಗೆ ನಗರಸಭೆಯ ನಂಬರ್ ನೀಡಲಿದೆ. ಮನೆ ಮನೆಗೆ ತೆರಿಗೆ ಬಾಕಿ ಇದ್ದರೆ ಅದನ್ನು ತಿಳಿಸಿ, ತೆರಿಗೆ ಪಾವತಿಗೆ ವಿನಂತಿಸುವ ಅಭಿಯಾನ ಇದಾಗಿದ್ದು, ನಗರಸಭೆಯನ್ನು ಆರ್ಥಿಕ ಸುಸ್ಥಿರತೆಯತ್ತ ಒಯ್ಯಲು ಪ್ರಯತ್ನಗಳು ಸಾಗಿವೆ.
ನಗರಸಭೆ ಜನರಿಗೆ ಮೂಲ ಸೌಕರ್ಯ ನೀಡಲು ಬದ್ಧವಿದೆ. ಹಾಗೆಯೇ ಜನತೆ ಸಹ ತೆರಿಗೆ ಕಟ್ಟಬೇಕು. ಒಳಚರಂಡಿ ವ್ಯವಸ್ಥೆ ಸಂಪರ್ಕ ಸಕ್ರಮ ಮಾಡಿಕೊಳ್ಳಬೇಕು. ನಗರವನ್ನು ಸ್ವಚ್ಛವಾಗಿಡಲು ಮತ್ತು ಅಕ್ರಮವಾಗಿರುವ ಕೆಲ ಅಂಶಗಳನ್ನು ಸಕ್ರಮ ಮಾಡಿ, ಸುಧಾರಣೆಯತ್ತ ನಗರಸಭೆಯನ್ನು ಕೊಂಡಯ್ಯಲು ಪ್ರಯತ್ನ ಸಾಗಿದೆ. ಇದಕ್ಕೆ ಜನರ ಸಹಕಾರ ಸಹ ಮುಖ್ಯ.ಎಸ್.ಯೋಗೇಶ್ವರ ಪೌರಾಯುಕ್ತರು,
ನಗರಸಭೆ ಕಾರವಾರ ನಾಗರಾಜ ಹರಪನಹಳ್ಳಿ