Advertisement

ನೆರೆಹಾವಳಿ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ದಿಗೆ 100 ಕೋಟಿ ರೂ.

09:47 AM Nov 08, 2019 | Team Udayavani |

ಹಾವೇರಿ: ನೆರೆಯಿಂದ ಹಾವಳಿಗೊಳಗಾದ ಜಿಲ್ಲೆಗೆ ಮೂಲಸೌಕರ್ಯ ಅಭಿವೃದ್ಧಿಗಾಗಿಗೆ 3-4 ದಿನದೊಳಗೆ 100 ಕೋಟಿ ರೂ‌ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

Advertisement

ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರದಿಂದ ಮಂಜೂರಾದ ಮೂರು ಹಾಗೂ ರಾಜ್ಯದ ಒಂದು ಸೇರಿ ನಾಲ್ಕು ಮೆಡಿಕಲ್ ಕಾಲೇಜುಗಳಿಗೆ ಜಾಗ ಗುರುತಿಸಿ ಒಂದೇ ಮಾದರಿಯಲ್ಲಿ ನಕ್ಷೆ ತಯಾರಿಸಿ 15-20 ದಿನದಲ್ಲಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರಿಗೆ 307 ಕೋಟಿ ರೂ. ಪರಿಹಾರ ನೀಡಲಾಗಿದೆ. ಎನ್ ಡಿಆರ್ ಎಫ್ ನಿಯಮದ ಪ್ರಕಾರ ಇಲ್ಲಿನ ರೈತರಿಗೆ 141 ಕೋಟಿ ರೂ. ಬಂದಿದ್ದರೆ, ರಾಜ್ಯ ಸರ್ಕಾರ ಪ್ರತಿ ರೈತನಿಗೂ 10 ಸಾವಿರ ರೂ. ಹೆಚ್ಚುವರಿಯಾಗಿ ಕೊಡುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next