Advertisement

‘ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಮುಹೂರ್ತ

02:44 PM Dec 08, 2021 | Team Udayavani |

ಹೊಸಬರ “ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಡಿ.ಎಸ್‌.ರವಿ ಯಾದವ್‌ “ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಚಿತ್ರದ ಟೈಟಲ್‌ಗೆ “ಕೊಡ ಬೇಡ ಕಳಿಬೇಡ… ಕೂಡಿದರೆ ಟೈಂ ವೇಸ್ಟ್‌… ಕಳೆದರೆ ಲೈಫ್ ವೇಸ್ಟ್‌ ಸುಮ್ನೆ ನೋಡು?’ ಎಂಬ ಟ್ಯಾಗ್‌ ಲೈನ್‌ ಇದೆ.

ಇನ್ನು ತಮ್ಮ ಚಿತ್ರಕ್ಕೆ ಇಂಥದ್ದೊಂದು ವಿ”ಚಿತ್ರ’ ಹೆಸರಿಟ್ಟಿರುವ ಬಗ್ಗೆ ಮಾತನಾಡುವ ಚಿತ್ರತಂಡ, “ನಾಲ್ಕು ಆರು ಸಂಖ್ಯೆಗಳನ್ನು ಗುಣಿಸಿದರೆ 24 ಬರುತ್ತದೆ. ಒಂದು ದಿನಕ್ಕೆ 24 ಗಂಟೆಯನ್ನು ಕೂಡಿದ್ರೆ ಸಮಯಕ್ಕೆ ಅರ್ಥ ಬರುತ್ತದೆ.  ಅದನ್ನು ಕಳೆದರೆ ದಿನ ವ್ಯರ್ಥವಾಗುತ್ತದೆ. ಜೀವನ ಶೂನ್ಯವಾಗುತ್ತದೆ. ಇಂಥದ್ದೊಂದು ತರ್ಕವನ್ನು ಇಟ್ಟುಕೊಂಡು ಅದನ್ನು ಸಿನಿಮಾದಲ್ಲಿ ಹೇಳುತ್ತಿದ್ದೇವೆ’ ಎಂದು ವಿವರಣೆ ನೀಡುತ್ತದೆ.

“ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರವನ್ನು ಶಿವಕುಮಾರ್‌ ಆರ್‌. ಬಿ, ಸತೀಶ್‌ ಮತ್ತು ಗೌಡ ಕೆ. ಎಂ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಶಿವಂಗಿ ನಾಯಕನಾಗಿ, ಯಶಿಕಾ ರಾಜ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಮೇಶ್‌ ಭಟ್‌, ಬ್ಯಾಂಕ್‌ ಜನಾರ್ಧನ್‌, ಸಂತೋಷ್‌, ವೀರಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next