Advertisement

ಗೌರವ ವಂದನೆ ಬಯಸಿ ವಿವಾದ

11:34 PM Sep 15, 2021 | Team Udayavani |

ತೃಶೂರ್‌: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸದಸ್ಯ, ಮಲಯಾಳ ನಟ ಸುರೇಶ್‌ ಗೋಪಿ ವಿವಾದಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಪುತ್ತೂರ್‌ ಎಂಬ ಗ್ರಾಮಕ್ಕೆ ಸಂಸದ ಸುರೇಶ್‌ ಗೋಪಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿ ತಮಗೆ ಗೌರವ ವಂದನೆ ನೀಡಬೇಕು ಎಂದು ಪಟ್ಟು ಹಿಡಿದದ್ದೇ ಬೆಳವಣಿಗೆಗೆ ಕಾರಣವಾಗಿದೆ.

Advertisement

ಮಲಯಾಳ  ಸುದ್ದಿವಾಹಿನಿಗಳಲ್ಲಿ ಈ ಬಗ್ಗೆ ವರದಿ ಪ್ರಸಾರವಾಗುತ್ತಲೇ, ಪ್ರತಿಕ್ರಿಯೆ ನೀಡಿದ ಸುರೇಶ್‌ ಗೋಪಿ, “ಗೌರವ ವಂದನೆ ನೀಡಲೇಬೇಕು ಎಂದು ಪಟ್ಟು ಹಿಡಿದಿಲ್ಲ. ನಾನು ಸಂಸದನಾಗಿರುವ ಹಿನ್ನೆಲೆಯಲ್ಲಿ ಗೌರವ ನೀಡಬೇಕು  ಎಂದು ಪೊಲೀಸ್‌ ಅಧಿಕಾರಿಗೆ ಸೂಚಿಸಿದ್ದೆ’ ಎಂದಿದ್ದಾರೆ. ಹಲವು ಸಿನೆಮಾಗಳಲ್ಲಿ ಅವರು ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next