Advertisement
ತಲ್ಲೂರಿನಲ್ಲಿತಲ್ಲೂರು ಗ್ರಾಮ ಪಂಚಾಯತ್ ತಲ್ಲೂರು, ಉಪ್ಪಿನಕುದ್ರು 2 ಗ್ರಾಮಗಳನ್ನು ಹೊಂದಿದೆ. ತಲ್ಲೂರಿನಲ್ಲಿ ಕೋಟೆಬಾಗಿಲು, ಪಾರ್ತಿಕಟ್ಟೆ, ಹೊಸ್ಮಠ, ಹೊರ್ಲಿಬೆಟ್ಟು, ರಾಜಾಡಿ, ನಟ್ಟಿಬೈಲು, ಪಿಂಗಾಣಿಗುಡ್ಡೆ, ಚಿತ್ತೇರಿಮಕ್ಕಿ, ಕಡಮಾರು, ನಾಯರಬಾಳು, ಬೆಂಡೆಹಿತ್ಲು, ಮಾರನಮನೆ ಮುಂತಾದ ಸಣ್ಣ ಸಣ್ಣ ಕೇರಿಗಳಿವೆ.
ಲವಣ ನೀರಿನಿಂದ ಕೂಡಿರುವ ಈ ಗ್ರಾಮವು ಉಪ್ಪಿನಕುದ್ರು ಹೆಸರಿನ ಜತೆ ಸುಂದರ ದ್ವೀಪದಂತೆ ಕಾಣುವ ಈ ಊರಿಗೆ ಲವಣಪುರ ಎಂದೂ ಕರೆ ಯುತ್ತಾರೆ. ಗ್ರಾಮದ ಸುತ್ತಲೂ ಪಂಚಾವಳಿ ನದಿಗಳಿಂದ ಕೂಡಿರುತ್ತದೆ. ಸೌಪರ್ಣಿಕಾ, ಚಕ್ರಾನದಿ, ಕುಬಾjನದಿ, ವಾರಾಹಿ ನದಿ, ದಾಸನಕಟ್ಟೆ ನದಿಗಳು ಒಂದಾಗಿ ಹರಿಯುತ್ತದೆ. ಪಶ್ಚಿಮ ಭಾಗದಲ್ಲಿ ಹೊಳೆಗೆ ಅಂಟಿಕೊಂಡು ಅರಬ್ಬೀ ಸಮುದ್ರವಿದೆ. ಆದರೆ ಕುಡಿ ಯಲು ಹನಿನೀರಿಲ್ಲ.
Related Articles
ಈ ಬಾರಿ ನೀರಿನ ಸಮಸ್ಯೆ ಈಗಲೇ ಕಾಣಿಸಿ ಕೊಳ್ಳತೊಡಗಿದೆ. 4-5 ತಾಸಿನಲ್ಲಿ ತುಂಬುವ ಟ್ಯಾಂಕಿ ಈಗ 8-10 ತಾಸು ತೆಗೆದುಕೊಳ್ಳುತ್ತದೆ. ಟ್ಯಾಂಕಿ ಭರ್ತಿಯಾಗದೇ ಉಪ್ಪಿನಕುದ್ರು ಕೊನೆ ಪ್ರದೇಶಕ್ಕೆ ನೀರು ಹರಿಯುವುದಿಲ್ಲ. ಬೇಡರಕೊಟ್ಟಿಗೆ, ಶಂಕ್ರಿಬೆಟ್ಟು ಮೊದಲಾದೆಡೆ ಸಮಸ್ಯೆ ಇದೆ. ಉಪ್ಪಿನಕುದ್ರುವಿಗೆ ಪೈಪ್ಲೈನ್ ನೀರೇ ಆಧಾರ. ತಲ್ಲೂರಿನ ಕೋಟೆಬಾಗಿಲು ಎಂಬಲ್ಲಿ ಈವರೆಗೆ ಸಮಸ್ಯೆ ಇದ್ದರೂ ಈ ಬಾರಿ ಗೇಟ್ವಾಲ್Ì ಅಳವಡಿಸಿದ ಕಾರಣ ಸಮಸ್ಯೆ ತಲೆದೋರುವ ಸಾಧ್ಯತೆ ಕಡಿಮೆ.
Advertisement
ಸಿಹಿನೀರಿಲ್ಲಇಡೀ ತಲ್ಲೂರು ಗ್ರಾಮದಲ್ಲಿ ತಲ್ಲೂರಿನಿಂದ ಪಾರ್ಪಿಕಟ್ಟೆಯ 1 ಕಿಮೀ. ಪ್ರದೇಶದಲ್ಲಿ ಮಾತ್ರ ಸಿಹಿನೀರು ದೊರೆಯುವುದು. ಇದು ಪಂಚಾಯತ್ನ 6 ಸಾವಿರ ಜನಸಂಖ್ಯೆಗೆ ಪೂರೈಕೆಯಾಗಬೇಕು. ಸಬ್ಲಾಡಿ, ಕೋಟೆಬಾಗಿಲು ಸೇರಿದಂತೆ ಇತರ ಎಲ್ಲ ಕಡೆ ಉಪ್ಪುನೀರು. ತಲ್ಲೂರಿನಲ್ಲಿ 200, ಉಪ್ಪಿನಕುದ್ರುವಿನಲ್ಲಿ 300ರಷ್ಟು ನಳ್ಳಿ ಸಂಪರ್ಕಗಳಿವೆ. ನೀರು ಸರಬರಾಜಿಗಾಗಿ 6 ಬೃಹತ್ ಟ್ಯಾಂಕಿಗಳಿವೆ. ಮನವಿ ಮಾಡಿದ್ದೇವೆ
ಎರಡೂ ಗ್ರಾಮಗಳಿಗೆ ಒಂದೇ ಕಡೆಯ ಕೊಳವೆಬಾವಿಗಳಿಂದ ನೀರು ಕೊಡಬೇಕು. ಶಾಶ್ವತ ಪರಿಹಾರಕ್ಕೆ ಶಾಸಕರಿಗೆ, ಪುರಸಭೆಗೆ ಕೂಡ ಮನವಿ ಮಾಡಿದ್ದೇವೆ. ಸ್ಪಂದನೆ ಸಿಗಲಿಲ್ಲ, ಇನ್ನೊಮ್ಮೆ ಪುರಸಭೆಗೆ ಮನವಿ ಮಾಡಲಾಗುವುದು. ಬಜೆಟ್ನಲ್ಲಿ ಘೋಷಣೆಯಾದ ಸೌಕೂರು ಸಿದ್ದಾಪುರ ಏತ ನೀರಾವರಿ ಯೋಜನೆಯಿಂದ ಈ ಭಾಗಕ್ಕೂ ಪ್ರಯೋಜನ ದೊರೆಯಲಿದೆ ಎಂಬ ಆಶಯ ನಮ್ಮದು.
– ಆನಂದ ಬಿಲ್ಲವ, ಅಧ್ಯಕ್ಷರು ಈ ವರ್ಷ ಬೇಗ
ಈ ವರ್ಷ ಬೇಗನೇ ನೀರು ಆರುತ್ತಿದೆ. ಆದ್ದರಿಂದ ಬೇಗನೇ ಟ್ಯಾಂಕರ್ ನೀರು ಕೊಡಬೇಕಾದೀತು. ಕಳೆದ ವರ್ಷ ಮೇ ತಿಂಗಳಲ್ಲಷ್ಟೇ ಟ್ಯಾಂಕರ್ ನೀರು ಪೂರೈಸಿದ್ದೆವು. ಸಮಸ್ಯೆ ಆಗದಂತೆ ಕ್ರಮ ವಹಿಸಲಾಗುತ್ತಿದೆ. ಹಾಗಿದ್ದರೂ ಉಪ್ಪಿನಕುದ್ರುವಿಗೆ ಹೊರಗಿನ ನೀರೇ ಅನಿವಾರ್ಯ.
– ನಾಗೇಂದ್ರ ಜೆ. ಪಿಡಿಒ – ಲಕ್ಷ್ಮೀ ಮಚ್ಚಿನ