Advertisement

ಖೈದಿ ಹುಡುಗ ರೌದ್ರವತಾರ

06:00 AM Oct 26, 2018 | |

ಈ ಹಿಂದೆ “ಖೈದಿ’, “ಸೈಕೋ’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ನಟ ಧನುಷ್‌ ಈಗ ರೌದ್ರಾವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಧನುಷ್‌ ಈಗ “ರೌದ್ರಂ’ ಎಂಬ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಹೊರಬಂದಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ “ರೌದ್ರಂ’ ಚಿತ್ರದ ಮೊದಲ ದೃಶ್ಯದ ತುಣುಕುಗಳನ್ನು ನಟ ವಿನೋದ್‌ ಪ್ರಭಾಕರ್‌ ದಂಪತಿ ಬಿಡುಗಡೆಗೊಳಿಸಿದರು.

Advertisement

ಇದೇ ವೇಳೆ ಮಾತನಾಡಿದ ವಿನೋದ್‌ ಪ್ರಭಾಕರ್‌, “ರೌದ್ರಂ ಟೀಸರ್‌ಗಳು ಚೆನ್ನಾಗಿವೆ. ಚಿತ್ರದಲ್ಲಿ ಏನು ಕಥೆ ಇರಬಹುದು
ಎಂಬ ಕುತೂಹಲವನ್ನು ಮೂಡಿಸುವಂತಿದೆ. ಇದೇ ಕುತೂಹಲ ಹೀಗೆ ಕೊನೆಯವರೆಗೂ ಕಾಯ್ದುಕೊಂಡರೆ, ಪ್ರೇಕ್ಷಕರು ಬಂದು ಸಿನಿಮಾ ನೋಡಿ ಹಿಟ್‌ ಮಾಡುತ್ತಾರೆ. ಚಿತ್ರ ಯಶಸ್ವಿಯಾಗಲಿ, ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.

ಎ.ಎಸ್‌ ಗ್ರೂಪ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಎ.ಎಸ್‌ ಭಾರದ್ವಾಜ್‌ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. “ರೌದ್ರಂ’ ಚಿತ್ರಕ್ಕೆ ಶ್ರೀನಿವಾಸ್‌ ತಿಮ್ಮಯ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್‌, ಲವ್‌ ಕಂ ಥ್ರಿಲ್ಲರ್‌ ಶೈಲಿಯ ಈ ಚಿತ್ರದಲ್ಲಿ ನಮ್ಮ ನಡುವೆ ನಡೆಯುವ ಹೊಸ ಕಥೆಯೊಂದನ್ನು ತೆರೆಮೇಲೆ ಹೇಳುತ್ತಿದ್ದೇವೆ ಎನ್ನುವುದು
ಚಿತ್ರತಂಡದ ಮಾತು.

“ರೌದ್ರಂ’ ಚಿತ್ರದ ಹಾಡುಗಳಿಗೆ ಸ್ಯಾಮ್‌ ಸಿ.ಎಸ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಹರ್ಷ.ಎ, ಇಮ್ರಾನ್‌ ಸರ್ದಾರಿಯಾ, ಗಣೇಶ್‌ ಹೆಗಡೆ ನೃತ್ಯ ಸಂಯೋಜಿಸಿದ್ದಾರೆ. “ಮμ¤’ ಖ್ಯಾತಿಯ ಛಾಯಾಗ್ರಹಕ ನವೀನ್‌ ಕುಮಾರ್‌, “ರೌದ್ರಂ’ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನ ಚಿತ್ರಕ್ಕಿದೆ.

ಚಿತ್ರದ ದೃಶ್ಯಗಳಿಗೆ “ಟಗರು’ ಖ್ಯಾತಿ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಚಿತ್ರದ ಸಾಹಸ ದೃಶ್ಯಗಳಿಗೆ ರವಿವರ್ಮ ಸಾಹಸ ನಿರ್ದೇಶನವಿದ್ದರೆ, ರವಿ ಸಂತೇಹಕ್ಲು ಕಲಾ ನಿರ್ದೇಶನ ಮಾಡಿದ್ದಾರೆ. ಸದ್ಯ ಟೀಸರ್‌ ಬಿಡುಗಡೆಯ ಮೂಲಕ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ “ರೌದ್ರಂ’ ಚಿತ್ರತಂಡ, ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next