Advertisement

ಮನೆ ಮೇಲ್ಛಾವಣಿ ಕುಸಿದು ಸ್ಥಳದಲ್ಲೇ ಮೂವರ ದುರ್ಮರಣ

09:59 AM Aug 27, 2019 | keerthan |

ಬಳ್ಳಾರಿ: ರಾತ್ರಿ ಮಲಗಿದ್ದ ವೇಳೆ ಕಚ್ಚಾ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗದಲ್ಲಿ ನಡೆದಿದೆ.

Advertisement

ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ ಕುಸಿತ ಕಂಡಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (45), ಹಸೀನಾ (25), ಇಮ್ರಾನ್ (3) ಮನೆಯ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.

 

ಆಗಾಗ ಮಳೆ ಸುರಿದ ಪರಿಣಾಮ ಈ ಮನೆಯು ಶಿಥಿಲಾವಸ್ಥೆಗೆ ತಲುಪಿದ್ದು, ಉಳಿದು ಕೊಳ್ಳಲು ಸೂರಿಲ್ಲದೇ ಅದೇ ಮನೆಯಲ್ಲೇ ನಿನ್ನೆಯ ರಾತ್ರಿ ಈ ಮೂವರು ಮಲಗಿದ್ದರು. ನಿನ್ನೆಯ ದಿನ ರಾತ್ರಿ 12ಗಂಟೆಯ ಸುಮಾರಿಗೆ ಕಚ್ಚಾಮನೆಯು ಸಂಪೂರ್ಣವಾಗಿ ಕುಸಿದಿದೆ.

Advertisement

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಸಿಇಒ ಕೆ. ನಿತೀಶಕುಮಾರ ಅವರು ತಡರಾತ್ರಿ ಭೇಟಿ ನೀಡಿ ಘಟನೆಯ ಮಾಹಿತಿಯನ್ನು ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next