Advertisement

ಕಿರಾತಕ-2 ಚಿತ್ರದ ಸಂಭಾವನೆ ಹಿಂದಿರುಗಿಸಿದ ಯಶ್ |ನಿರ್ಮಾಪಕರ ಹಿತ ಕಾಯ್ದ ರಾಕಿ ಭಾಯ್

01:55 PM Sep 16, 2021 | Team Udayavani |

ಬೆಂಗಳೂರು: ಕಿರಾತಕ-2 ಚಿತ್ರಕ್ಕೆ ಡೇಟ್ ಹೊಂದಾಣಿಕೆಯಾಗದ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಅವರು ತಾವು ಪಡೆದಿದ್ದ ಸಂಭಾವನೆ ಹಾಗೂ ಚಿತ್ರೀಕರಣಕ್ಕೆ ಖರ್ಚಾಗಿದ್ದ ಹಣವನ್ನು ನಿರ್ಮಾಪಕ ಜಯಣ್ಣ ಅವರಿಗೆ ಹಿಂದುರಿಗಿಸಿದ್ದಾರೆ.

Advertisement

ಕಳೆದ 2 ದಿನಗಳಿಂದ ಈ ಸುದ್ದಿ ಕೇಳಿ ಬಂದಿತ್ತು. ಯಶ್ ಅವರು ಕಿರಾತಕ 2 ಚಿತ್ರದಿಂದ ಹೊರ ಬಂದಿದ್ದಾರೆ. ಅದಕ್ಕಾಗಿಯೇ ಹಣ ವಾಪಸ್ ಮಾಡಿದ್ದಾರೆ. ಒಟ್ಟು 13 ಕೋಟಿ ರೂ. ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಈ ಅಂತೆ ಕಂತೆಗಳಿಗೆ ಬ್ರೇಕ್ ಹಾಕಿರುವ ನಿರ್ಮಾಪಕ ಜಯಣ್ಣ ಅವರು ಯಶ್ ಅವರು ಹಣ ನೀಡಿದ್ದು ನಿಜ. ಆದರೆ, 13 ಕೋಟಿ.ರೂ ಖರ್ಚಾಗಿಲ್ಲ. ಯಶ್ ತಾವು ಪಡೆದ ಸಂಭಾವನೆಗೆ ಬಡ್ಡಿ ಸೇರಿಸಿ ಕೊಟ್ಟಿದ್ದಾರೆ ಎಂದಿದ್ದಾರೆ.

ಕಿರಾತಕ ಚಿತ್ರದ ಬಗ್ಗೆ ಮಾಹಿತಿ ನೀಡಿದ ಜಯಣ್ಣ, ‘ಯಶ್‌ ಕಿರಾತಕ 2 ಶೂಟಿಂಗ್‌ಗೆ ಖರ್ಚಾದ ಹಣಕ್ಕೆ ಎಕ್ಸ್‌ಟ್ರಾ ಹಣ ಸೇರಿಸಿ ಸೆಟಲ್‌ ಮಾಡಿದ್ದಾರೆ. ಕೆಜಿಎಫ್‌ ಸಿನಿಮಾ ಆರಂಭಕ್ಕೂ ಮೊದಲು 20 ದಿನಗಳ ಕಾಲ ಕಿರಾತಕ 2 ಶೂಟಿಂಗ್‌ ನಡೆದಿತ್ತು. ಆ ಬಳಿಕ ಅವರು ಕೆಜಿಎಫ್‌ನಲ್ಲಿ ಬ್ಯುಸಿ ಆದ ಕಾರಣ ಈ ಸಿನಿಮಾ ಶೂಟಿಂಗ್‌ಗೆ ಡೇಟ್ಸ್‌ ಹೊಂದಿಸಲು ಆಗಲಿಲ್ಲ. ಇದೀಗ ಕೆಜಿಎಫ್‌ 2 ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ ಮೊತ್ತಕ್ಕೆ ಇನ್ನೊಂದಿಷ್ಟುಹಣ ಸೇರಿಸಿ ವಾಪಾಸ್‌ ಮಾಡಿದ್ದಾರೆ. ಹಾಗಂತ ಇದು 13 ಕೋಟಿ ರು.ಗಳಷ್ಟುಬೃಹತ್‌ ಮೊತ್ತ ಅನ್ನೋದೆಲ್ಲ ಸುಳ್ಳು. 20 ದಿನದ ಶೂಟಿಂಗ್‌ಗೆ ಅಷ್ಟೆಲ್ಲ ಖರ್ಚಾಗೋದಿಲ್ಲ. ಅಲ್ಲದೇ ಯಶ್‌ ಅವರ ಬಳಿ ನಾನು ಇದೆಲ್ಲ ಬೇಡ, ನಿಮ್ಮಿಂದ ನಮಗೆ ಒಳ್ಳೆಯದಾಗಿದೆ ಅಂತಲೂ ಹೇಳಿದ್ದೆ. ಆದರೆ ಅವರೇ ನಿಮಗೆ ತೊಂದರೆ ಆಗೋದು ಬೇಡ ಅಂದು ಹಣ ಹಿಂದಿರುಗಿಸಿದ್ದಾರೆ ಎಂದರು.

ಯಶ್‌ ಹಣ ವಾಪಾಸ್‌ ಮಾಡಿದ ಮಾತ್ರಕ್ಕೆ ನಮ್ಮಿಬ್ಬರ ನಡುವಿನ ಬಾಂಧವ್ಯ ಹಾಳಾಗಿಲ್ಲ. ಅವರು ಕಿರಾತಕ 2 ಸಿನಿಮಾದಿಂದ ಆಚೆ ಹೋಗಿದ್ದಾರೆ ಎಂಬ ಅರ್ಥವೂ ಅಲ್ಲ. ಆದರೆ ಮಂಡ್ಯದ ನೇಟಿವಿಟಿ ಇರುವ ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಚಿತ್ರವಾಗಿ ರೂಪಿಸುವುದು ಕಷ್ಟ. ಬೇರೆ ಭಾಷೆಗೆ ಡಬ್ಬಿಂಗ್‌ ಮಾಡಬಹುದಷ್ಟೇ. ಹೀಗಾಗಿ ಕಿರಾತಕ 2 ಸಿನಿಮಾದ ಸಾಧ್ಯಾಸಾಧ್ಯತೆ ಯಶ್‌ ಮೇಲೆ ನಿಂತಿದೆ. ಸದ್ಯ ಕಾಯುತ್ತಿದ್ದೇವೆ’ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next