Advertisement

ಕೋರ್ಟ್‌ ಮುಂದೆ ಕ್ಷಮೆಯಾಚಿಸಿದ ಉದ್ಯಮಿ ರಾಬರ್ಟ್‌ ವಾದ್ರಾ

07:39 PM Sep 21, 2022 | Team Udayavani |

ನವದೆಹಲಿ: ಜಾರಿ ನಿರ್ದೇಶನಾಲಯದ ಹಣಕಾಸು ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಉದ್ಯಮಿ ರಾಬರ್ಟ್‌ ವಾದ್ರಾ ಅವರು ನ್ಯಾಯಾಲಯದ ನಿಯಮ ಉಲ್ಲಂಘಿಸಿ ಪ್ರಯಾಣ ಮಾಡಿದ್ದು, ಆ ವಿಚಾರವಾಗಿ ಇ.ಡಿ ನ್ಯಾಯಾಲಯದ ಮೆಟ್ಟಿಲೇರಿದೆ.

Advertisement

ಪ್ರಯಾಣ ನಿಯಮ ಉಲ್ಲಂಘಿಸಿದ್ದಕ್ಕೆ, ವಾದ್ರಾ ವಿರುದ್ಧ ಕ್ರಮಕ್ಕೆ ಆದೇಶಿಸಬೇಕೆಂದು ಇ.ಡಿ ಕೇಳಿದೆ. ಆದರೆ ನನ್ನಿಂದ ತಪ್ಪಾಗಿದೆ, ಕ್ಷಮಿಸಿ ಎಂದು ರಾಬರ್ಟ್‌ ನ್ಯಾಯಾಲಯಕ್ಕೆ ಕೇಳಿದ್ದು, ಅದರ ತೀರ್ಪನ್ನು ದೆಹಲಿಯ ನ್ಯಾಯಾಲಯ ಗುರುವಾರ ನೀಡಲಿದೆ.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾರ ಪತಿ ರಾಬರ್ಟ್‌ ಆಗಸ್ಟ್‌ನಲ್ಲಿ ಅರಬ್‌ ಸಂಯುಕ್ತ ಸಂಸ್ಥಾನದ ಮಾರ್ಗವಾಗಿ ಲಂಡನ್‌ಗೆ ತೆರಳಲು ನ್ಯಾಯಾಲಯದ ಅನುಮತಿ ಪಡೆದಿದ್ದರು. ಆದರೆ ಅವರು ಲಂಡನ್‌ ಪ್ರಯಾಣಕ್ಕೂ ಮೊದಲು ದುಬೈನಲ್ಲಿ 4 ದಿನ ವಾಸ ಹೂಡಿದ್ದರು. ಈ ಮೂಲಕ ಕೋರ್ಟ್‌ನ ಷರತ್ತನ್ನು ಉಲ್ಲಂ ಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next