Advertisement

ರಾಬರ್ಟ್‌ ವಾದ್ರಾ ಹಗರಣ: ಸಿಬಿಐ ತನಿಖೆಗೆ ರಾಜಸ್ಥಾನ ಸರಕಾರ ಶಿಫಾರಸು

11:45 AM Aug 23, 2017 | udayavani editorial |

ಜೈಪುರ : ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಶಾಮೀಲಾಗಿರುವರೆನ್ನಲಾದ ಬಿಕಾನೇರ್‌ ಭೂ ಕಬಳಿಕೆ ಹಗರಣ ಮತ್ತು ಹಣ ದುರುಪಯೋಗ ಹಗರಣದ ತನಿಕೆಯನ್ನು ಸಿಬಿಐ ಶೀಘ್ರವೇ ಆರಂಭಿಸಲಿದೆ. 

Advertisement

ರಾಜಸ್ಥಾನ ಸರಕಾರ, ರಾಬರ್ಟ್‌ ವಾದ್ರಾ ಹಗರಣಗಳ ತನಿಖೆಯನ್ನು ನಡೆಸುವಂತೆ ಸಿಬಿಐ ಅನ್ನು ಕೇಳಿಕೊಂಡಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ತಿಳಿಸಿದ್ದಾರೆ. 

ವಾದ್ರಾ ಹಗರಣಗಳು ಸಂಕೀರ್ಣ ಸ್ವರೂಪದ್ದಾಗಿವೆ ಮತ್ತು ಹಲವು ವರ್ಷಗಳ ಅವಧಿಗೆ ಅವು ಹರಡಿಕೊಂಡಿವೆ. ನಾವು ಈ ಹಗರಣಗಳ ಬಗ್ಗೆ ನಮ್ಮ ಕಡೆಯಿಂದ ತನಿಖೆ ನಡೆಸಿದ್ದೇವೆ; ಅನೇಕರನ್ನೂ ಬಂಧಿಸಿದ್ದೇವೆ. ಆದರೆ ಈ ಒಟ್ಟು ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐ ನಡೆಸುವುದೇ ಒಳಿತೆಂದು ತೀರ್ಮಾನಿಸಿದ್ದೇವೆ ಮತ್ತು ಅಂತೆಯೇ ಸಿಬಿಐ ಅನ್ನು ಕೇಳಿಕೊಂಡಿದ್ದೇವೆ ಎಂದು ಕಟಾರಿಯಾ ಮಾಧ್ಯಮಕ್ಕೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next