Advertisement

ರಸ್ತೆ ಕಾಮಗಾರಿ ಪರಿಶೀಲನೆ

05:40 PM Jan 26, 2022 | Team Udayavani |

ಲಿಂಗಸುಗೂರು: ಪಟ್ಟಣದ ಬೈಪಾಸ್‌ ರಸ್ತೆಯಿಂದ ಹೊಸ ರೈತ ಸಂಪರ್ಕ ಕೇಂದ್ರದವರೆಗೆ ನಡೆಯುತ್ತಿರುವ ಸಿ.ಸಿ ರಸ್ತೆ ಕಾಮಗಾರಿಯನ್ನು ಪಿಡಬ್ಲೂಡಿ ಎಇಇ ಗೋಪಾಲರೆಡ್ಡಿ ಪರಿಶೀಲನೆ ನಡೆಸಿದರು.

Advertisement

ಕೆಕೆಆರ್‌ಡಿಬಿಯ 40 ಲಕ್ಷ ರೂ. ಅನುದಾನದಲ್ಲಿ 6 ಮೀಟರ್‌ ಅಗಲದ ಸಿ.ಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಅಲ್ಲದೇ ರೈತ ಸಂಪರ್ಕ ಕೇಂದ್ರ ಹಾಗೂ ಅಕ್ಕಪಕ್ಕದಲ್ಲಿ ನೂತನ ಬಡಾವಣೆಗಳು ಇರುವುದರಿಂದ ಮನೆಗಳ ನಿರ್ಮಾಣವಾಗುತ್ತಿದ್ದರಿಂದ ಬೃಹತ್‌ ಲಾರಿಗಳು ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಭೂಮಿ ಕಪ್ಪು ಮಣ್ಣಿನಿಂದ ಕೂಡಿದ್ದರಿಂದ ಕಪ್ಪು ಮಣ್ಣು ತೆಗೆದು ಮರಂ ಹಾಕಿ ಗಟ್ಟಿಗೊಳಿಸಿ ಸಿ.ಸಿ ರಸ್ತೆ ಮಾಡಬೇಕು. ಮಳೆ ಬಂದಾಗ ನೀರು ನಿಲ್ಲದಂತೆ ಸಿ.ಸಿ ರಸ್ತೆ ಮಾಡುವಂತೆ ಜೆಇ ಯಲಗೂರೇಶ ಅವರಿಗೆ ಸೂಚನೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next