Advertisement
ಪಟ್ಟಣದ ವಾಲ್ಮೀಕಿ ವೃತ್ತ ಅಭಿವೃದ್ಧಿಗಾಗಿ ಬಲಶೆಟ್ಟಿಹಾಳ, ಹುಣಸಗಿ, ಶಾಂತಪುರ ಮೂರು ಮುಖ್ಯ ರಸ್ತೆಗಳವರೆಗೂಅಂಗಡಿಗಳ ತೆರವುಗೊಳಿಸಲಾಯಿತು. ರಸ್ತೆ ಅಗಲೀಕರಣಕ್ಕೆ ಈಗಾಗಲೇ ವರ್ತಕರಿಗೆ ಮೂರು ಬಾರಿ ನೋಟಿಸ್ ನೀಡಿ
ಎಚ್ಚರಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಹಾಕಿಕೊಂಡಿದ್ದ ಶೆಡ್ಗಳನ್ನು ತೆಗೆದಿದ್ದರು.
ಸಮಯ ಸಾರ್ವಜನಿಕರು ಮುಗು ಕಟ್ಟಿಕೊಂಡು ಸಂಚರಿಸುವಂತಾದರೆ ಇನ್ನೂ ವಾಹನ, ಬೈಕ್ ಸವಾರರು ಸಂಚಾರಕ್ಕೆ ಪರಿತಪಿಸಬೇಕಾಯಿತು. ಬೀದಿಪಾಲಾದ ವರ್ತಕರು: ಅನೇಕ ವರ್ಷಗಳಿಂದಲೂ ಅನಧಿಕೃತವಾಗಿ ಅಂಗಡಿ ಹಾಕಿಕೊಂಡು ವ್ಯಾಪಾರಕ್ಕೆ ಹಣಿಯಾಗಿದ್ದರು. ಆದರೆ ರಸ್ತೆ ಅಗಲೀಕರಣ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ವರ್ಗದ ವರ್ತಕರು ವ್ಯಾಪಾರಕ್ಕೆ ಸ್ಥಳಾವಕಾಶ ಇಲ್ಲದೆ ಬೀದಿಪಾಲಾಗುವಂತೆ ಮಾಡಿದೆ ಎಂದು ಜನರ ಅಭಿಪ್ರಾಯವಾಗಿದೆ.
Related Articles
50 ಮೀಟರ್ನಂತೆ ಮೂರು ಪ್ರಮುಖ ರಸ್ತೆಗೆ ಡಾಂಬರೀಕರಣ ಹಾಕಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 150 ಮೀಟರ್ ಉದ್ದದ ರಸ್ತೆ ಅಭಿವೃದ್ಧಿಯಾಗಲಿದೆ.
Advertisement
ರಸ್ತೆ ಮಧ್ಯ ಭಾಗದಿಂದ 7.5 ಮೀಟರ್ನಂತೆ ಎರಡು ಬದಿ ಸೇರಿ ಒಟ್ಟು 15 ಮೀಟರ್ ರಸ್ತೆ ಅಗಲೀಕರಣಗೊಳಿಸಲಾಗುತ್ತಿದೆ ಎನ್ನಲಾಗುತ್ತಿ¨
ಅಂಗಡಿ ತೆರವು ಕಾರ್ಯ ಚುರುಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ವರ್ತಕರಿಗೆ ಮೂರು ಬಾರಿ ನೋಟಿಸ್ ನೀಡಿತ್ತು. ಅಲ್ಲದೆ ಡಂಗುರ ಸಾರಲಾಗಿತ್ತು. ತೆರವುಗೊಳಿಸುವ ಕಾರ್ಯ ಮುಗಿದ ತಕ್ಷಣವೇ ಎರಡು-ಮೂರು ದಿನಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಸುಭಾಶ್ಚಂದ್ರ, ಎಇ