Advertisement

ಕುಂಭಾಶಿ: ರಾ.ಹೆ. 66 ರಲ್ಲಿ ಡಿವೈಡರ್‌ ಏರಿ ನಿಂತ ಬಸ್; ರಸ್ತೆ ಹೊಂಡದಿಂದ ಅವಾಂತರ

12:19 PM Jul 16, 2022 | Team Udayavani |

ತೆಕಟ್ಟೆ: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರದಿಂದ ಉಡುಪಿಯ ಕೆಲ ರಸ್ತೆಗಳಲ್ಲಿ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತಿದೆ.

Advertisement

ಶನಿವಾರ ರಸ್ತೆ ಮಧ್ಯ ಬಿದ್ದಿರುವ ಹೊಂಡದಲ್ಲಿ ಮಳೆ ನೀರು ತುಂಬಿದ್ದರಿಂದ ಬಸ್ಸೂಂದು ಹೊಂಡದಲ್ಲಿ ಹೋಗಿ ಡಿವೈಡರ್ ಏರಿ ನಿಂತ ಘಟನೆ ತಾಲೂಕಿನ ಕುಂಭಾಶಿ ಕೊರವಡಿ ಕ್ರಾಸ್ ಸಮೀಪದಲ್ಲಿ ನಡೆದಿದೆ. ಇದರೊಂದಿಗೆ ಒಂದು ಒಮ್ನೀ ವಾಹನ ಸಹ ಹೊಂಡಕ್ಕೆ ಹಾರಿ ಟೈಯರ್ ಪಂಚರ್ ಆಗಿದೆ.

ಹೊಂಡದಲ್ಲಿ‌ನೀರು ಶೇಖರಣೆಯಾಗಿರುವುದರಿಂದ ವಾಹನ ಸವಾರರಿಗೆ ಗೋಚರವಾಗದೆ ಇಂತಹ ಅವಘಡಗಳಿಗೆ ಕಾರಣವಾಗಿದೆ.

ರಾ.ಹೆ.66 ರ ಹೊಂಡ ಗುಂಡಿಯ ಬಗ್ಗೆ ಉದಯವಾಣಿ ಜನಪರ ಕಾಳಜಿವಹಿಸಿ ಇತ್ತೀಚೆಗಷ್ಟೇ ವಿಸ್ತೃತವಾದ ವರದಿ ಪ್ರಕಟಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next