Advertisement

ಸೋಲೂರು ಗ್ರಾಮದ ರಸ್ತೆಯಲ್ಲಿ ಆಳುದ್ದ ಗುಂಡಿಗಳು!

02:43 PM May 18, 2023 | Team Udayavani |

ಕುದೂರು: ಸೋಲೂರು ಗ್ರಾಮದಿಂದ ಒಂಭತ್ತನ ಗುಂಟೆ ಗ್ರಾಮದವರೆಗೆ ವಿಸ್ತರಿಸಿರುವ ರಸ್ತೆ ಹಳ್ಳ- ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.

Advertisement

ರಸ್ತೆಯ ಮೇಲೆ ಪುಟ್ಟ ಕೆರೆಯಂತೆ ಕಾಣಿಸುವ ಗುಂಡಿಗಳಿದ್ದು, ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ ಗ್ರಾಮಕ್ಕೂ ಇದೇ ರಸ್ತೆಯಲ್ಲೇ ಸಂಚರಿಸಬೇಕು. ಈ ಕ್ಷೇತ್ರಕ್ಕೆ ಇಬ್ಬರು ಶಾಸಕರು, ಇಬ್ಬರು ಸಂಸದರಿದ್ದರೂ, ಹಳ್ಳ-ಗುಂಡಿಗಳಿಂದ ಕೂಡಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಸೇರಿದೆ. ಆದರೆ, ವಿಧಾನಸಭೆ ಚುನಾವಣೆ ನೆಲ ಮಂಗಲ ಕ್ಷೇತ್ರಕ್ಕೆ ಸೇರುತ್ತದೆ. ಲೋಕಸಭಾ ಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಸೇರುತ್ತದೆ. ತಾಪಂ, ಮತ್ತು ಜಿಪಂ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಇಂತಹ ಅತಂತ್ರ ಸ್ಥಿತಿಯಲ್ಲಿರುವ ಕಾರಣ ಎಲ್ಲರಿಂದಲೂ ಈ ಹೋಬಳಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಅಪಘಾತ ಹೆಚ್ಚಳ: ಕುದೂರಿನಿಂದ ಸೂಲೂರು ರಸ್ತೆಯಲ್ಲಿ ಮೂರರಿಂದ ನಾಲ್ಕು ಅಡಿ ಆಳದ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಇಷ್ಟೆಲ್ಲಾ ಅನಾ ಹುತ ಸಂಭವಿಸಿದರೂ, ಅಲ್ಲಿರುವ ಸ್ಥಳೀಯ ಗ್ರಾಪಂ ಗುಂಡಿಗಳಿಗೆ ತ್ಯಾಪೆ ಹಾಕುವ ಅಥವಾ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕೂಡ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದೇ ರಸ್ತೆಯಲ್ಲಿ ರೈಲ್ವೆ ಬ್ರಿಡ್ಜ್ ಮೇಲೆ ಆಳುದ್ದ ಗುಂಡಿ ಬಿದ್ದು ರಸ್ತೆ ಹಾಳಾಗಿದೆ. ಇಲ್ಲಂತೂ ದ್ವಿಚಕ್ರ ವಾಹನ ಸವಾರರು ಮತ್ತು ಲಾರಿ, ಬಸ್‌, ಆಟೋದವರು ಕೂಡ ಹೋಗಲು ಸಾಧ್ಯವಿಲ್ಲ. ಸ್ವಲ್ಪ ಪಕಕ್ಕೆ ಸರಿದರೂ ರೈಲ್ವೆ ಬ್ರಿಡ್ಜ್ನಿಂದ ಕೆಳಗೆ ಬೀಳುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ.

ಕೆರೆಯಂತೆ ನಿರ್ಮಾಣವಾಗಿರುವ ಈ ರಸ್ತೆಯಲ್ಲಿ ಪ್ರತಿನಿತ್ಯವೂ ನೂರಾರು ವಾಹನ ಸಂಚರಿಸುತ್ತವೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ರಸ್ತೆಯಾಗಿದೆ. ರಸ್ತೆ ಸರಿಪಡಿಸಿಕೊಡುವಂತೆ ನೆಲಮಂಗಲ ಹಾಗೂ ಮಾಗಡಿ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

Advertisement

ರಾತ್ರಿ ವೇಳೆ ಈ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ಕಾಣಲ್ಲ. ವಾಹನ ಗಳನ್ನು ಓಡಾಡಿಸುವುದೇ ಕಷ್ಟವಾಗಿದೆ. ಶೀಘ್ರವಾಗಿ ಗುಂಡಿ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿ ಕೊಡಬೇಕು. ●ಮೂರ್ತಿ, ಸೋಲೂರು ಗ್ರಾಮಸ್ಥ

ಇಂದು ನಾವು ಕುಂಟುಂಬ ಸಮೇತ ಮದುವೆಗೆ ಹೋಗಿ ಸೋಲೂರು ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಬಂದಾಗ ರೈಲ್ವೆ ಬ್ರಿಡ್ಜ್ ಮೇಲೆ ಇರುವ ಗುಂಡಿಯಲ್ಲಿ ನೀರು ತುಂಬಿತ್ತು. ಬೇರೆ ಜಾಗವಿಲ್ಲದ ಕಾರಣ ನೀರಿನಲ್ಲಿ ಬರಬೇಕಾದರೆ ಇಬ್ಬರು ನೀರಿಗೆ ಬಿದ್ದು ಗಾಯಗೊಂಡಿದ್ದೇವೆ. ●ಗುರುಪ್ರಸಾದ್‌, ಹುಲಿಕಲ್‌ ಗ್ರಾಮಸ್ಥ

ರಸ್ತೆ ಸಂಪೂರ್ಣ ಹಾಳಾಗಿದೆ. ಸರಿಪಡಿಸುವ ಕೆಲಸಕ್ಕೆ ಮುಂದಾ ಗುತ್ತಿಲ್ಲ. ಪ್ರತಿನಿತ್ಯ ಒಬ್ಬರಾದರೂ ಗುಂಡಿ ಯಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಮಳೆಗಾಲ ಆರಂಭ ವಾಗಿದೆ. ಇನ್ನಾದರೂ ಸರಿಪಡಿಸು ತ್ತಾರೆಯೋ ಕಾದು ನೋಡಬೇಕಿದೆ. ●ಸುಭಾಷ, ದ್ವಿಚಕ್ರ ವಾಹನ ಸವಾರ

-ಕೆ.ಎಸ್‌.ಮಂಜುನಾಥ್‌ ಕುದೂರು

Advertisement

Udayavani is now on Telegram. Click here to join our channel and stay updated with the latest news.

Next