Advertisement

ವರ್ಷ ಕಳೆದ್ರೂ ರಸ್ತೆ ಅಭಿವೃದ್ಧಿ ಪಡಿಸಿಲ್ಲ 

02:52 PM Aug 16, 2022 | Team Udayavani |

ಕುದೂರು: ಗ್ರಾಮದ ಮುಖ್ಯರಸ್ತೆ ಕಳೆದ ಒಂದು ವರ್ಷ ಕಳೆದರೂ ಅಭಿವೃದ್ಧಿ ಪಡಿಸಿಲ್ಲ ಎಂದು ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆಯಲ್ಲಿ ಭತ್ತದ ಪೈರು ನಾಟಿ ಮಾಡಿ ಶಾಸಕ ಎ. ಮಂಜುನಾಥ್‌ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಟಿ.ಹನುಮಂತ ರಾಯಪ್ಪ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ಇಲ್ಲಿ ಬೃಹತ್‌ ಮರ ಇದ್ದು, ಅದನ್ನು ಕೆಡವಿ ನಿಮಗೆ ರಸ್ತೆ ಅಗಲಿ ಕರಣಗೊಳಿಸಿ ಎರಡು ಕಡೆ ಚರಂಡಿ ನಿರ್ಮಿಸಿ ಸುಂದರ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿ ರಸ್ತೆಗೆ ಮೂರು ಬಾರಿ ಗುದ್ದಲಿಪೂಜೆ ಮಾಡಿದ್ದರು. ಆದರೆ, ಇದುವರೆಗೂ ರಸ್ತೆ ಡಾಂಬರಿಕರಣಗೊಳ್ಳಲಿಲ್ಲ. ಶಾಸಕರು ಕಳೆದ ಗುರುವಾರ ಮತ್ತೆ ಗುದ್ದಲಿಪೂಜೆ ಮಾಡುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಪತ್ತೆ ಇಲ್ಲ ಎಂದು ದೂರಿದರು.

ಯಾವ ಅಭಿವೃದ್ಧಿಯೂ ಆಗಿಲ್ಲ: ಯುವಮುಖಂಡ ಕೆ.ಬಿ.ಚಂದ್ರುಶೇಖರ್‌ ಮಾತನಾಡಿ, ಶಾಸಕರು ಕೇವಲ ಸುಳ್ಳು ಭರವಸೆ ನೀಡಿ ಕಾಲ ಕಳೆಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ನೀವು ಕೂಡ ಕುದೂರು ಗ್ರಾಮಕ್ಕೆ ಹಲವಾರು ಬಂದು ಹೋಗಿದ್ದೀರಲ್ಲ ಮಾಗಡಿ ತಾಲೂಕಿಗೆ ನಿಮ್ಮ ಕೊಡುಗೆ ಏನು? ಈ ರಸ್ತೆ ಸರಿಪಡಿಸಿ ಸಾವಿರಾರು ಜನರು ಇಲ್ಲಿ ಓಡಾಡುತ್ತಾರೆ. ನಾವುಗಳೆಲ್ಲ ಊರು ಅಭಿವೃದ್ಧಿಯಾಗಲಿ ಎಂದು ಸಹಕಾರ ನೀಡಿದ್ದೇವು. ಆದರೆ, ಯಾವ ಅಭಿವೃದ್ಧಿಯೂ ಆಗಲಿಲ್ಲ ಎಂದರು.

ಸುಳ್ಳು ಭರವಸೆ: ಕಾಂಗ್ರೆಸ್‌ ಮುಖಂಡ ಲೋಕೇಶ್‌ ಮಾತನಾಡಿ, ಶಾಸಕರ ಕೆಲಸಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಅವರ ಸುಳ್ಳು ಭರವಸೆ ಅವರ ವಿರುದ್ಧವಾಗಿ ಹೇಳುತ್ತಿವೆ ಹೊರತು, ಅವರು ಕೆಲಸ ಮಾಡಿಸುವುದಕ್ಕೆ ನಾವುಗಳ್ಯಾರು ತೊಂದರೆ ಕೊಡುವುದಿಲ್ಲ. ಶಾಸಕರು ಬರೀ ಸುಳ್ಳು ಹೇಳಿಕೊಂಡೆ ಜೀವನ ಮಾಡುತ್ತಿದ್ದು, ತಾಲೂಕಿನಲ್ಲಿ 5 ವರ್ಷದಿಂದ ಏನಾದರೂ ಅಭಿವೃದ್ಧಿ ಪಡಿಸಿದ್ದಾರೆಂದರೆ ಚರ್ಚೆಗೆ ಬರಲಿ ನಾವು ಸಿದ್ದರಿದ್ದೇವೆ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next