Advertisement

Road Mishap ಉಳ್ಳಾಲ: ರಿಕ್ಷಾ-ಬೈಕ್‌ ಢಿಕ್ಕಿ; ಗಾಯ

12:20 AM Jun 15, 2024 | Team Udayavani |

ಉಳ್ಳಾಲ:ರಿಕ್ಷಾ ಮತ್ತು ಬೈಕ್‌ ಅಪಘಾತದಲ್ಲಿ ಪತ್ರಕರ್ತ ವಿನಯ್‌ ಭಟ್‌ ಕುರ್ನಾಡು (36) ಗಾಯಗೊಂಡ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

Advertisement

ವಿನಯ್‌ ಭಟ್‌ ಅವರು ಬೈಕಿನಲ್ಲಿ ಕರ್ತವ್ಯ ನಿಮಿತ್ತ ತೆರಳುತ್ತಿದ್ದ ಸಂದರ್ಭ ನೇತ್ರಾವತಿ ಸೇತುವೆಯಲ್ಲಿ ಆಕ್ಟಿವಾ ಸ್ಕೂಟರ್‌ ಒಂದರ ಸವಾರ ತನ್ನ ಮೊಬೈಲ್‌ ಬಿತ್ತು ಎಂದು ಒಮ್ಮಲೆ ಬ್ರೇಕ್‌ ಹಾಕಿದ್ದ. ಈ ಸಂದರ್ಭದಲ್ಲಿ ಅದರ ಹಿಂಭಾಗದಲ್ಲಿದ್ದ ರಿಕ್ಷಾ ಚಾಲಕ ತತ್‌ಕ್ಷಣ ಬಲಕ್ಕೆ ತಿರುಗಿಸಿದಾಗ ರಿಕ್ಷಾ ವಿನಯ್‌ ಅವರಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ವಿನಯ್‌ ಅವರನ್ನು ಸ್ಥಳೀಯರು ಹಾಗೂ ಪೊಲೀಸ್‌ ಸಿಬಂದಿ ರಿಜಿ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದರು. ಸಂಚಾರಿ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next