Advertisement

Road Mishap ರಾಮಲ್‌ಕಟ್ಟೆ: ಸ್ಕೂಟರ್‌ಗಳೆರಡು ಢಿಕ್ಕಿ; ಗಾಯ

11:48 PM Nov 10, 2023 | Team Udayavani |

ಬಂಟ್ವಾಳ: ರಾ.ಹೆ. 75ರ ತುಂಬೆ ಸಮೀಪದ ರಾಮಲ್‌ಕಟ್ಟೆಯಲ್ಲಿ ಸ್ಕೂಟರ್‌ಗಳೆರಡು ಢಿಕ್ಕಿ ಹೊಡೆದುಕೊಂಡು ಒಂದು ಸ್ಕೂಟರ್‌ ಸವಾರ ಗಾಯಗೊಂಡ ಘಟನೆ ನ. 8ರಂದು ನಡೆದಿದೆ.

Advertisement

ಸವಾರ ತುಂಬೆ ನಿವಾಸಿ ಬಾಲಚಂದ್ರ ಗಾಯಗೊಂಡು ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಮತ್ತೊಂದು ಸ್ಕೂಟರ್‌ ಸವಾರ ಪ್ರಭೇಶ್‌ ಅವರು ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಬೈಕ್‌ ಢಿಕ್ಕಿ: ಸವಾರರಿಗೆ ಗಾಯ
ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ ಕಾರು ಹಾಗೂ ಬೈಕಿನ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರು ಗಾಯಗೊಂಡ ಘಟನೆ ನ. 8ರಂದು ನಡೆದಿದೆ.

ಘಟನೆಯಲ್ಲಿ ಅಮ್ಮುಂಜೆ ಗ್ರಾಮ ನಿವಾಸಿಗಳಾದ ಸವಾರ ರವೀಂದ್ರ ಹಾಗೂ ಅವರ ಅಣ್ಣ ಶೇಖರ್‌ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

Advertisement

ಕಾರು ಚಾಲಕ ಶ್ರೀನಿವಾಸ ಅವರು ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next