Advertisement

Road Mishap ಕುಣಿಗಲ್: ಬೈಕ್‌ಗೆ ಕಾರು ಡಿಕ್ಕಿ; ಸವಾರ ಸಾವು

08:12 PM Jun 10, 2024 | Team Udayavani |

ಕುಣಿಗಲ್ : ಅಪರಿಚಿತ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 33 ರ ತಾಲೂಕಿನ ಬಾಗೇನಹಳ್ಳಿ ಗೇಟ್ ಬಳಿ ಸೋಮವಾರ ನಡೆದಿದೆ.

Advertisement

ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ಗ್ರಾಮದ ರಾಮಚಂದ್ರಯ್ಯ (27) ಮೃತ ದುರ್ದೈವಿ.

ರಾಮಚಂದ್ರಯ್ಯ ಕೆಲಸದ ನಿಮಿತ ಬೈಕ್‌ನಲ್ಲಿ ಕುಣಿಗಲ್ ಪಟ್ಟಣಕ್ಕೆ ಬಂದು ತನ್ನ ಗ್ರಾಮ ಬಾಗೇನಹಳ್ಳಿಗೆ ವಾಪಸ್ಸ್ ಆಗುತ್ತಿದ್ದ ವೇಳೆ ಬಾಗೇನಹಳ್ಳಿ ಗೇಟ್ ಬಳಿ ಅಪರಿಚಿತ ಕಾರು ಡಿಕ್ಕಿ ಹೊಡೆದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next