Advertisement

Road mishap: ಬಸ್ – ಆಟೋ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು

09:28 PM Apr 04, 2024 | Team Udayavani |

ಕೊಳ್ಳೇಗಾಲ: ರಸ್ತೆ ಸಾರಿಗೆ ಬಸ್ ಮತ್ತು ಆಟೋ ಢಿಕ್ಕಿಯಾದ ಪರಿಣಾಮ ಆಟೋ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ(ಏ.4 ರಂದು) ತಾಲೂಕಿನ ಧನಗಿರೆ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಶಿವನಸಮುದ್ರ ಗ್ರಾಮದ ನಿವಾಸಿಗಳಾದ ಆಟೋ ಚಾಲಕ ಸೈಯದ್ ಮನ್ಸೂರ್ ಹುಸೇನ್ (35) ನೂರ್ ಜಹಾನ್ (57) ಸ್ಥಳದಲ್ಲೇ ಮೃತಪಟ್ಟವರು. ರೆಹಮನ್ ಅನೀಸಪ್(42) ಸಂಸತ್ ಬೇಗಂ (50) ತೀವ್ರ ಗಾಯಗೊಂಡಿದ್ದು ಅವರನ್ನು ನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಗಾಯಾಳು ಸಂಬಂಧಿ ಸೈಯದ್ ನೀಡಿದ ದೂರು ನೀಡಿದ್ದು, ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ರಸ್ತೆ ಸಾರಿಗೆ ಬಸ್ ಮತ್ತು ಆಟೋ ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next