Advertisement

ಐವರ್ನಾಡು: ಕಾರು-ಮಹೀಂದ್ರ ವಾಹನ ಢಿಕ್ಕಿ; ಚಾಲಕನಿಗೆ ಗಾಯ

09:32 PM May 10, 2022 | Team Udayavani |

ಸುಳ್ಯ: ಕ್ರೇಟಾ ಕಾರು ಹಾಗೂ ಮಹೀಂದ್ರ ಜೀತೋ ವಾಹನ ಢಿಕ್ಕಿ ಹೊಡೆದು ಚಾಲಕ ಗಾಯಗೊಂಡಿರುವ ಘಟನೆ ಮೇ 9ರಂದು ಸುಳ್ಯ-ಬೆಳ್ಳಾರೆ ರಸ್ತೆಯ ಐವರ್ನಾಡುವಿನಲ್ಲಿ ಸಂಭವಿಸಿದೆ.

Advertisement

ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುತ್ತಿದ್ದ ಕ್ರೇಟಾ ಕಾರು ಹಾಗೂ ಐವರ್ನಾಡು ಕಡೆಗೆ ತೆರಳುತ್ತಿದ್ದ ಮಹೀಂದ್ರ ಜೀತೋ ವಾಹನದ ಮಧ್ಯೆ ಢಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಜೀತೋ ವಾಹನದ ಚಾಲಕ ನವೀನ್‌ ಅವರಿಗೆ ಗಾಯಗಳಾಗಿದ್ದು, ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಬೆಳ್ಳಾರೆ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next