Advertisement

Road Mishap ಕಾರು ಅಪಘಾತ: 6 ಮಂದಿಗೆ ಗಾಯ

12:32 AM May 20, 2024 | Team Udayavani |

ಬೆಳ್ತಂಗಡಿ: ಕಾರ್ಕಳ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ತೆಂಕಕಾರಂದೂರು ಗ್ರಾಮದ ಉದಯಗಿರಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿ 6 ಮಂದಿ ಗಾಯಗೊಂಡ ಘಟನೆ ಮೇ 19ರಂದು ಬೆಳಗ್ಗೆ ಸಂಭವಿಸಿದೆ.

Advertisement

ಚಾಲಕ ಬಸಯ್ಯ ಹಾಗೂ ಪತ್ನಿ ಮಹಾದೇವಿ, ಮಕ್ಕಳಾದ ಶಂಭು ಲಿಂಗಯ್ಯ (15), ವೀರಯ್ಯ (9) ಮತ್ತು ನೀಲಮ್ಮ ಹಾಗೂ ಕುಮಾರ್‌ ಅವರಿಗೆ ಗಾಯಗಳಾಗಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳ-ಗುರುವಾಯನಕೆರೆ ರಸ್ತೆಯಲ್ಲಿ ನಾರಾವಿ ಕಡೆಯಿಂದ ಬರುತ್ತಿದ್ದ ಕಾರು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕಂಬ ಇರುವ ಮಣ್ಣಿನ ದಿಣ್ಣೆಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಜಖಂಗೊಂಡಿದೆ. ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next