Advertisement

Road Mishap ಬೈಕಿಗೆ ಕಾರು ಢಿಕ್ಕಿ; ಸವಾರ ಸಾವು

11:07 PM Jun 26, 2024 | Team Udayavani |

ಹೆಬ್ರಿ: ವರಂಗ ಗ್ರಾಮದ ಕೆಲಕಿಲ ಸೇತುವೆ ಬಳಿ ಅಜೆಕಾರು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ.

Advertisement

ಪಳ್ಳಿ ಗ್ರಾಮದ ವಿಶ್ವನಾಥ್‌ ಮೃತಪಟ್ಟವರು. ಢಿಕ್ಕಿಯ ಪರಿಣಾಮ ಸವಾರರಿಬ್ಬರು ರಸ್ತೆಗೆ ಬಿದ್ದು ತೀವ್ರ ಗಾಯಗೊಂಡರು.

ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವಾಗ ವಿಶ್ವನಾಥ್‌ ದಾರಿ ಮಧ್ಯೆ ಮೃತ ಪಟ್ಟರು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next