Advertisement

Road mishap: ಕೆಎಸ್‌ಆರ್‌ಟಿಸಿ ಬಸ್‌-ದ್ವಿಚಕ್ರ ವಾಹನ ನಡುವೆ ಡಿಕ್ಕಿ: ಸವಾರ ಸಾವು

12:51 PM Jan 12, 2024 | Team Udayavani |

ಕುದೂರು:  ಕೆಎಸ್‌ಆರ್‌ಟಿಸಿ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುದೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಲೂರು ರೈಲ್ವೆ ಬ್ರಿಡ್ಜ್ ಬಳಿ ಸಂಭವಿಸಿದೆ.

Advertisement

ರಾಮನಗರ ಜಿಲ್ಲೆ ಕುದೂರು ಹೋಬಳಿಯ ಮಲ್ಲಪ್ಪನಹಳ್ಳಿಯ ವೆಂಕಟಾಚಲ (32) ಮೃತ ದುರ್ದೈವಿ. ಸೋಲೂರು ಬಳಿ ಇರುವ ಶ್ರೀರಾಮ ಫೈನಾನ್ಸ್‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ವೆಂಕಟಾಚಲ  ಗುರುವಾರ ಬೆಳಗ್ಗೆ ತನ್ನ ಪತ್ನಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಕುದೂರಿನಲ್ಲಿ ಬಿಟ್ಟು ಕೆಲಸ ಹೋಗಿ ಬರುವುದಾಗಿ ಹೇಳಿ ಹೋಗುತ್ತಿದ್ದ ವೇಳೆ ಸೋಲೂರು ಬಳಿ ಇರುವ ರೈಲ್ವೆ ಬ್ರಿಡ್ಜ್ ಸಮೀಪ ಅತಿ ವೇಗವಾಗಿ ಅಜಾಗರುಕತೆಯಿಂದ ಬಂದ ಕೆಎಸ್‌ಆರ್‌ಟಿಸಿ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ ಕೆಎಸ್‌ಆರ್‌ಟಿಸಿ ಬಸ್‌ ಅಡಿ ಸಿಲುಕಿ ನುಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ಪಕ್ಕದಲ್ಲಿಯೇ ಇದ್ದ ಬೇಲಿ ಎಗರಿಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್‌ ಡ್ರೈವರ್‌ ಹಾಗು ಕಂಡಕ್ಟರ್‌ ಪರಾರಿಯಾಗಿದ್ದಾರೆ. ಕುದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next